ಬೆಂಗಳೂರು:ಇಲ್ಲಿನ ಜಯನಗರದಲ್ಲಿರುವ ಉಪ್ಕಾರ್ ಡೆವಲಪರ್ಸ್ ಕಂಪನಿಗೆ ಆ್ಯಂಬುಲೆನ್ಸ್ನಲ್ಲಿ ಬಂದ ಖದೀಮರು, ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಈ ವೇಳೆ ಸಿಸಿಟಿವಿಗೆ ಬಣ್ಣ ಬಳಿದು ದರೋಡೆಗೆ ಯತ್ನಿಸಿದ್ದಾರೆ. ಇದೇ ತಿಂಗಳ ಒಂದನೇ ತಾರೀಖಿನಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆ್ಯಂಬುಲೆನ್ಸ್ನಲ್ಲಿ ಕಂಪನಿಗೆ ಬಂದ ದರೋಡೆಕೋರರು: ಸಿಸಿಟಿವಿಗೆ ಬಣ್ಣ ಬಳಿದು ಕಳ್ಳತನಕ್ಕೆ ಯತ್ನ
ಜಯನಗರದಲ್ಲಿರುವ ಉಪ್ಕಾರ್ ಡೆವಲಪರ್ಸ್ ಕಂಪನಿಗೆ ಆ್ಯಂಬುಲೆನ್ಸ್ನಲ್ಲಿ ಬಂದ ಚಾಲಾಕಿ ದರೋಡೆಕೋರು, ಸಿಸಿಟಿವಿಗೆ ಬಣ್ಣ ಬಳಿದು ದರೋಡೆ ಮಾಡಲು ಯತ್ನಿಸಿದ್ದಾರೆ.
ಆ್ಯಂಬುಲೆನ್ಸ್ನಲ್ಲಿ ಬಂದು ದರೋಡೆಗೆ ಯತ್ನಿಸಿದ ಚಾಲಾಕಿ ದರೋಡೆಕೋರು
ಆದರೆ ಕಂಪನಿಯಲ್ಲಿ ಯಾವುದೇ ನಗದು ಇರದ ಕಾರಣ ಖದೀಮರು ಹಾಗೆ ಹೊರಟು ಹೋಗಿದ್ದಾರೆ. ಸದ್ಯ ನಗರದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.