ಕರ್ನಾಟಕ

karnataka

ಶಿವಾಜಿನಗರದಲ್ಲಿ ರಿಜ್ವಾನ್​ಗೆ ಎಲ್ಲರ ಸಹಕಾರ ಸಿಗಲಿದೆ.. ಮಾಜಿ ಸಚಿವ ಯು ಟಿ ಖಾದರ್

ಶಿವಾಜಿನಗರದ ಪಾಲಿಕೆ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇವತ್ತಿನ ಸಭೆಗೆ ಎಲ್ಲ ಮುಖಂಡರು ಬಂದಿದ್ದಾರೆ. ಪಾಲಿಕೆ ಸದಸ್ಯರು ನಾಳೆ ಸಭೆಗೆ ಬರ್ತಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.

By

Published : Nov 18, 2019, 10:01 PM IST

Published : Nov 18, 2019, 10:01 PM IST

ಮಾಜಿ ಸಚಿವ ಯುಟಿ ಖಾದರ್​ ಹೇಳಿಕೆ

ಬೆಂಗಳೂರು:ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್‌​ಗೆ ಎಲ್ಲರ ಸಹಕಾರ ಸಿಗಲಿದೆ. ನಾಳೆ ನಡೆಯಲಿರುವ ಸಭೆಗೆ ಪಾಲಿಕೆ ಸದಸ್ಯರು ಬರುತ್ತಾರೆ ಎಂದು ಮಾಜಿ ಸಚಿವ ಯು ಟಿ ಖಾದರ್​ ತಿಳಿಸಿದ್ದಾರೆ.

ಮಾಜಿ ಸಚಿವ ಯುಟಿ ಖಾದರ್​..

ಕೆಪಿಸಿಸಿ ಕಚೇರಿಯಲ್ಲಿ ಶಿವಾಜಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಖಂಡರ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ರಿಜ್ವಾನ್ ಅರ್ಷದ್ ಪರ ಎಲ್ಲರೂ ಇದ್ದಾರೆ. ರಿಜ್ವಾನ್ ಅರ್ಷದ್ ಗೆದ್ದೇ ಗೆಲ್ತಾರೆ ಎಂದು ವಿವರಿಸಿದರು. ರೋಷನ್ ಬೇಗ್ ಸಹಕಾರ ಪಡೆಯುವ ವಿಚಾರ ಮಾತನಾಡಿ, ಪಕ್ಷದ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸ್ತೇವೆ. ಅವರ ಬೆಂಬಲ ಪಡೆಯಬೇಕೋ.. ಬೇಡ್ವೋ.. ನಿರ್ಧರಿಸ್ತೇವೆ ಎಂದು ಹೇಳಿದರು.

ABOUT THE AUTHOR

...view details