ಬೆಂಗಳೂರು: ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಆತ್ಮೀಯ, ಮಿತ್ರ ಪತ್ರಕರ್ತ ರವಿ ಬೆಳಗೆರೆಯವರು ನಿಧನರಾದರು ಅನ್ನೋ ವಿಚಾರ ತಿಳಿಯಿತು. ಇದರಿಂದ ಮನಸ್ಸಿಗೆ ಬಹಳ ದುಃಖವಾಯಿತು. ಆದರೆ ಸದ್ಯ ಬೆಂಗಳೂರಿನಲ್ಲಿ ಇಲ್ಲದೇ ಇರುವ ಕಾರಣ ಅಂತಿಮ ದರ್ಶನ ಮಾಡಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಿವೃತ ಹಿರಿಯ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಬೆಳಗೆರೆ ಮಧ್ಯರಾತ್ರಿ ಬಂದು ರೌಡಿಗಳ ಮಾಹಿತಿ ಕಲೆ ಹಾಕ್ತಿದ್ದರು: ರವಿ ನೆನಪಿಸಿಕೊಂಡ ಟೈಗರ್ - Retired Tiger Ashok Kumar condolence to ravi belagere death
ಖ್ಯಾತ ಪತ್ರಕರ್ತ ರವಿಬೆಳಗೆರೆ ಇಂದು ನಿಧನರಾಗಿದ್ದು, ಹೀಗಾಗಿ ಬಹಳಷ್ಟು ಸಂತಾಪಗಳು ಎಲ್ಲೆಡೆಯಿಂದ ಕೇಳಿ ಬರ್ತಿದೆ. ತನಿಖಾ ವರದಿಗಾರಿಕೆಯಲ್ಲಿ ತನ್ನದೇ ಛಾಪು ಮೂಡಿಸಿದ ರವಿ ಬೆಳೆಗೆರೆ ಪೊಲೀಸ್ ಇಲಾಖೆಯಲ್ಲಿ ಕೂಡ ಬಹಳ ಹಿರಿಯ ಅಧಿಕಾರಿಗಳು, ನಿವೃತ್ತ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಚ್ಚು ಮೆಚ್ಚಾಗಿದ್ದರು.
![ಬೆಳಗೆರೆ ಮಧ್ಯರಾತ್ರಿ ಬಂದು ರೌಡಿಗಳ ಮಾಹಿತಿ ಕಲೆ ಹಾಕ್ತಿದ್ದರು: ರವಿ ನೆನಪಿಸಿಕೊಂಡ ಟೈಗರ್ ravi-belagere](https://etvbharatimages.akamaized.net/etvbharat/prod-images/768-512-9532622-thumbnail-3x2-sanju.jpg)
ರವಿಬೆಳೆಗೆರೆ
ನಿವೃತ್ತ ಟೈಗರ್ ಅಶೋಕ್ ಕುಮಾರ್ ರವಿ ಬೆಳಗೆರೆ ಬಗ್ಗೆ ಮಾತನಾಡಿದ್ದಾರೆ.
ಅಶೋಕ್ ಕುಮಾರ್ ಎನ್ಕೌಂಟರ್ಗೆ ಬಹಳ ಹೆಸರುವಾಸಿಯಾದ ವ್ಯಕ್ತಿ. ಸದ್ಯ ಪೊಲೀಸ್ ಇಲಾಖೆಯಲ್ಲಿ ನಿವೃತ್ತಿಯಾಗಿದ್ದು, ಇವರ ಕುರಿತ ಕೆಲ ಬರವಣಿಗೆಯನ್ನ ಕೂಡ ರವಿ ಬೆಳಗೆರೆ ಬರೆದಿದ್ರು.
TAGGED:
Retired Tiger Ashok Kumar