ಕರ್ನಾಟಕ

karnataka

ETV Bharat / state

ಕೈ ಅಲ್ಲ ಎದೆ ಬಗಿದ್ರೂ ಮಂಚೇನಹಳ್ಳಿ ತಾಲೂಕು ರಚನೆ ಹೋರಾಟಕ್ಕೆ ಬದ್ಧ.. ಡಾ. ಕೆ ಸುಧಾಕರ್ ತಿರುಗೇಟು - rebel mla reaction to former mla sudakar-statement

ಮಂಚೇನಹಳ್ಳಿ ಪ್ರತ್ಯೇಕ ತಾಲೂಕು ಮಾಡಲು ಮುಂದಾದವರ ಕೈ ಕತ್ತರಿಸುತ್ತೇನೆ ಎಂದು ಶಿವಶಂಕರ್ ರೆಡ್ಡಿ ಹೇಳಿಕೆ ನೀಡಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸುಧಾಕರ್, ನನ್ನ ಕೈ ಅಲ್ಲ, ಎದೆ ಬಗಿದರೂ ಮಂಚೇನಹಳ್ಳಿ ತಾಲೂಕು ರಚನೆಯ ವಿಷಯದಲ್ಲಿ ನಾನು ನನ್ನ ಜನರಿಗೆ ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.

ಅನರ್ಹ ಶಾಸಕ ಸುಧಾಕರ್

By

Published : Oct 20, 2019, 4:40 PM IST

Updated : Oct 20, 2019, 5:38 PM IST

ಬೆಂಗಳೂರು/ಚಿಕ್ಕಬಳ್ಳಾಪುರ: ಮಾಜಿ ಸಚಿವ ಶಿವಶಂಕರ್ ರೆಡ್ಡಿ ಹೇಳಿಕೆಗೆ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ. ಕೆ ಸುಧಾಕರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಚೇನಹಳ್ಳಿ ಪ್ರತ್ಯೇಕ ತಾಲೂಕು ಮಾಡಲು ಮುಂದಾದವರ ಕೈ ಕತ್ತರಿಸುತ್ತೇನೆ ಎಂದು ಶಿವಶಂಕರ್ ರೆಡ್ಡಿ ಹೇಳಿಕೆ ನೀಡಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸುಧಾಕರ್, ನನ್ನ ಕೈ ಅಲ್ಲ, ಎದೆ ಬಗಿದರೂ ಮಂಚೇನಹಳ್ಳಿ ತಾಲೂಕು ರಚನೆಯ ವಿಷಯದಲ್ಲಿ ನಾನು ನನ್ನ ಜನರಿಗೆ ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ಓದಿಗಾಗಿ:ನಮ್ಮ ಕ್ಷೇತ್ರಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇನೆ: ಅನರ್ಹ ಶಾಸಕನಿಗೆ ಮಾಜಿ ಸಚಿವ ಎಚ್ಚರಿಕೆ!

ಮಹಾತ್ಮಾ ಗಾಂಧಿಜೀರವರ 150ನೇ ಜಯಂತಿ ಆಚರಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಶಿವಶಂಕರ ರೆಡ್ಡಿ ವಿರುದ್ಧ ಕ್ರಮ ಜರುಗಿಸಲಿ. ಇಂದು ಇಡೀ ಜಗತ್ತಿಗೆ ಅವರ ಗೂಂಡಾ ಮನಸ್ಥಿತಿಯ ಪರಿಚಯವಾಗಿದೆ. ಸಮಾಜಕ್ಕೆ ಮಾದರಿಯಾಗಬೇಕಾದ ರಾಜಕಾರಣಿಗಳು ಇಂತಹ ಕೀಳು ಮಟ್ಟಕೆ ಇಳಿದಿರುವುದು ದುರ್ದೈವ ಎಂದಿದ್ದಾರೆ.

Last Updated : Oct 20, 2019, 5:38 PM IST

For All Latest Updates

TAGGED:

ABOUT THE AUTHOR

...view details