ಕರ್ನಾಟಕ

karnataka

By

Published : Jun 5, 2019, 9:30 AM IST

ETV Bharat / state

ನೇತ್ರಾವತಿ ನದಿ ನುಂಗುತ್ತಿದೆಯಾ ಎತ್ತಿನಹೊಳೆ ಯೋಜನೆ?: ಛಾಯಾಚಿತ್ರ ಪ್ರದರ್ಶನ

ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಮರಗಳು ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟದಲ್ಲಿವೆ. ಗಾಳಿ, ಜೀವಜಲವನ್ನು ಪಶ್ಚಿಮ ಘಟ್ಟ ಇಂದು ಕೊಡುತ್ತಿದೆ. ಆದ್ರೆ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟ ಕುಸಿದು ಮಣ್ಣು ಸಮುದ್ರಪಾಲಾದರೆ, ಮರಗಳ ನಾಶವಾದರೆ ರಾಜ್ಯವಷ್ಟೇ ಅಲ್ಲ ದೇಶದ ಹವಾಮಾನದ ಮೇಲೆಯೇ ಗಂಭೀರ ಪರಿಣಾಮ ಬೀರಲಿದೆ.

ನೈಜ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮಘಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿ ಮಾಡಲಾಗ್ತಿದೆ. ಪಶ್ಚಿಮಘಟ್ಟದ ಒಂದು ಬೆಟ್ಟವನ್ನು ಮುಟ್ಟಿದರೂ ಮರ್ಮಾಂಗಗಳಿಗೆ ಕೈ ಹಾಕಿದ ಹಾಗೆ. ಮರ ಕಡಿದು, ಬೆಟ್ಟಗಳ ನಾಶ ಮಾಡಿದರೆ ನೀರು ಹುಟ್ಟಿಸಲು ಸಾಧ್ಯವಿಲ್ಲ ಎಂದು ಹಿರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಎತ್ತಿನಹೊಳೆ ಯೋಜನೆ ವಿರುದ್ಧ ಮಾತನಾಡಿದರು.

ನಗರದ ಚಿತ್ರಕಲಾ ಪರಿಷತ್​ನಲ್ಲಿ ಫೋಟೋ ಜರ್ನಲಿಸ್ಟ್ ಸುಧೀರ್ ಶೆಟ್ಟಿಯವರ ಎರಡು ದಿನಗಳ 'ನೇತ್ರಾವತಿ ನದಿಯನ್ನು ನುಂಗುತ್ತಿದೆಯಾ-ಎತ್ತಿನಹೊಳೆ ಯೋಜನೆ' ಎಂಬ ವಿಷಯಾಧಾರಿತ ಹದಿನೈದನೇ ನೈಜ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಮರಗಳು ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟದಲ್ಲಿವೆ. ಗಾಳಿ, ಜೀವಜಲವನ್ನು ಪಶ್ಚಿಮ ಘಟ್ಟ ಇಂದು ಕೊಡುತ್ತಿದೆ.

ನೈಜ ಛಾಯಾಚಿತ್ರ ಪ್ರದರ್ಶನ

ಆದ್ರೆ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟ ಕುಸಿದು ಮಣ್ಣು ಸಮುದ್ರಪಾಲಾದರೆ, ಮರಗಳ ನಾಶವಾದರೆ ರಾಜ್ಯವಷ್ಟೇ ಅಲ್ಲ ದೇಶದ ಹವಾಮಾನದ ಮೇಲೆಯೇ ಗಂಭೀರ ಪರಿಣಾಮ ಬೀರಲಿದೆ. ಈ ಬಗ್ಗೆ ಪರಿಸರ ತಜ್ಞರು ಎಷ್ಟೇ ವರದಿಗಳನ್ನು ನೀಡಿದ್ರೂ ಸರ್ಕಾರ ಕೇಳುತ್ತಿಲ್ಲ. ಕಾರ್ಪೋರೇಟ್​​ ಕಂಪನಿಗಳ ನಿಯಮದಂತೆ ಸರ್ಕಾರ ನಡೆದುಕೊಳ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಪರಿಸರವಾದಿ ಎಸ್.ಆರ್.ಹಿರೇಮಠ್, ಡಾ. ಯಲ್ಲಪ್ಪ ರೆಡ್ಡಿ ಹಾಗೂ ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟಗಾರರು ಭಾಗಿಯಾಗಿದ್ದರು.


For All Latest Updates

TAGGED:

ABOUT THE AUTHOR

...view details