ಬೆಂಗಳೂರು:ಈಗಾಗಲೇ ಆರ್ಸಿಬಿ ಮ್ಯಾಚ್ ಫಾರ್ ಗ್ರೀನ್, ಎಂಬ ಶೀರ್ಷಿಕೆಯಡಿ ನಡೆಯುವ ಪಂದ್ಯದಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಸಂದೇಶ ಸಾರುತ್ತಾ ಬಂದಿದೆ. ಅಂದಿನ ದಿನ ಕಬ್ಬನ್ ಪಾರ್ಕ್ನಲ್ಲಿ ಸಸಿಗಳನ್ನು ನೆಟ್ಟು ಸಾರ್ಥಕತೆ ಮೆರೆಯುತ್ತಿದ್ದಾರೆ.
ಆರ್ಸಿಬಿ ನಿರ್ಧಾರಕ್ಕೆ ಶ್ವಾನ ಪ್ರಿಯರು ಫಿದಾ: ಡಾಗೌಟ್ಗೆ ಬೆಂಗಳೂರಿಗರಿಂದ ಮೆಚ್ಚುಗೆ! - undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳಿಗಾಗಿ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಜನರಿಗೆ ತುಂಬಾ ಹತ್ತಿರವಾಗುತ್ತಿದೆ. ಇತ್ತೀಚೆಗೆ ಪ್ರಾರಂಭ ಮಾಡಿರುವ ಡಾಗೌಟ್ಗೆ ಶ್ವಾನ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾಗೌಟ್ಗೆ ಬೆಂಗಳೂರಿಗರಿಂದ ಮೆಚ್ಚುಗೆ
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕು ನಾಯಿ ಪ್ರಿಯರಿಗೆ ಗುಡ್ ನ್ಯೂಸ್ ನೀಡಿರೋದು ನಮಗೆಲ್ಲ ಗೊತ್ತಿದೆ. ತವರಿನಲ್ಲಿ ನಡೆಯುವ ಪ್ರತಿಯೊಂದು ಪಂದ್ಯಗಳನ್ನ ವೀಕ್ಷಣೆ ಮಾಡಲು ನಾಯಿಗಳಿಗೂ ಅವಕಾಶ ನೀಡಿದೆ. ಪ್ರಾಣಿ ಪ್ರಿಯರು ತಮ್ಮ ಮುದ್ದಾದ ಶ್ವಾನಗಳ ಜೊತೆ ಮ್ಯಾಚ್ ನೋಡಿ ಸಂತೋಷ ಪಟ್ಟಿದ್ದು, ಆರ್ಸಿಬಿ ತಂಡದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ಈ ನಿರ್ಧಾರಕ್ಕೆ ಜನರಿಂದ ಒಳ್ಳೆಯ ಬೆಂಬಲ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.