ಕರ್ನಾಟಕ

karnataka

ETV Bharat / state

ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆಗೆ ಅನುಮತಿ ನೀಡಿದ್ದೇ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ: ಎನ್ ರವಿಕುಮಾರ್ - ಈಟಿವಿ ಭಾರತ ಕನ್ನಡ

ಸಿದ್ದರಾಮಯ್ಯ ಅವರು ಪುರಾವೆ ಇಲ್ಲದೆ ಮಾತನಾಡುತ್ತಾರೆ. ಅವರು ನಿರುದ್ಯೋಗಿಯಾಗಿ ಬಹಳ ಬಿಡುವಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

KN_BNG
ರವಿಕುಮಾರ್​​

By

Published : Nov 17, 2022, 10:27 PM IST

ಬೆಂಗಳೂರು: ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆಗೆ ಅನುಮತಿ ನೀಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ‌ನೀಡಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್, ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿಯ ಕಾರ್ಯವನ್ನು ಚಿಲುಮೆ ಸಂಸ್ಥೆಗೆ 2018ರಲ್ಲಿ ಸಮ್ಮಿಶ್ರ ಸರ್ಕಾರ ಕೊಟ್ಟಿತ್ತು. ಟೆಂಡರ್​ಅನ್ನು ಕರೆಯದೆ ಈ ಕೆಲಸವನ್ನು ನೀಡಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಕೆಲಸ ನೀಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಹಾಗಿದ್ದರೆ ರಾಜೀನಾಮೆ ಕೊಡಬೇಕಾದವರು ಯಾರು? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಖಾಸಗಿ ಸಂಸ್ಥೆ ಬಿಎಲ್ಓ ಗುರುತಿನ ಚೀಟಿಯನ್ನು ಬಳಸಿಕೊಂಡಿದ್ದಾರೆ ಎಂದು ಗೊತ್ತಾದಾಗ ಆದೇಶ ಹಿಂಪಡೆಯಲಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರದ್ದು ಬಾಲಿಷ ವರ್ತನೆ. ಅಕ್ರಮ ಆದರೆ ದೂರು ನೀಡಲಿ, ಕ್ರಮ ಕೈಗೊಳ್ಳಲಾಗುವುದು. ಇದರಲ್ಲೇನೂ ಅವ್ಯವಹಾರ ಆಗಿಲ್ಲ. ಬಿಎಲ್‍ಒಗಳಿಗೆ ಐಡಿ ಕೊಟ್ಟ ವಿಚಾರ ಗೊತ್ತಾದೊಡನೆ ಚಿಲುಮೆ ಸಂಸ್ಥೆಗೆ ಕೊಟ್ಟಿದ್ದ ಆದೇಶವನ್ನು ಬಿಬಿಎಂಪಿ ಹಿಂದಕ್ಕೆ ಪಡೆದಿದೆ ಎಂದು ಸ್ಪಷ್ಟಪಡಿಸಿದರು. 2018ರಲ್ಲಿ ಆದೇಶ ನೀಡಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಾಳೆಹಣ್ಣು ತಿನ್ನುತ್ತಿದ್ದರೇ ಎಂದೂ ಅವರು ಪ್ರಶ್ನಿಸಿದರು. ಅಕ್ರಮದ ತನಿಖೆ ಆಗಲಿ; ಉಪ್ಪು ತಿಂದವನು ನೀರು ಕುಡಿಯಲಿ ಎಂದರು.

ರವಿಕುಮಾರ್​​ ಪ್ರತಿಕ್ರಿಯೆ

ಸಿದ್ದರಾಮಯ್ಯನವರೇ ಗುತ್ತಿಗೆದಾರ:ಇದೇ ವೇಳೆ ಮಾತನಾಡಿದ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯನವರೇ ಒಬ್ಬ ಗುತ್ತಿಗೆದಾರ ಎಂದು ಕಿಡಿಕಾರಿದರು. ಮತದಾರರ ಪಟ್ಟಿ ಎಂಬುದು ಸಾರ್ವಜನಿಕ ದಾಖಲೆ. ಇದರಲ್ಲಿ ಮಾಹಿತಿ ಸೋರಿಕೆ ಆಗಲು ಏನಿದೆ?. ಸರ್ಕಾರ ಆದೇಶ ರದ್ದು ಮಾಡಿದ್ದನ್ನು ಮೆಚ್ಚಿಕೊಳ್ಳಬೇಕಿತ್ತು. ಅದರ ಬದಲಾಗಿ ರಾಜೀನಾಮೆ ಕೊಡಲು ಕೇಳುತ್ತಿದ್ದಾರೆ. ಈ ವಿಷಯದಲ್ಲಿ ನಾವು ತನಿಖೆ ಮಾಡುತ್ತೇವೆ. ಆದರೆ ಮಾತು ಮಾತಿಗೆ 40 ಶೇಕಡಾ ಎನ್ನುವ ನಿಮ್ಮ ಯೋಗ್ಯತೆಗೆ ಅದನ್ನು ಪ್ರೂವ್ ಮಾಡಲು ಸಾಧ್ಯವಾಯಿತೇ ಎಂದು ಕೇಳಿದರು.

ಸಿದ್ದರಾಮಯ್ಯರವರು ಜಾತಿ ಗಣತಿಗೆ ರೂ.200 ಕೋಟಿ ಕೊಟ್ಟಿದ್ದೇನೆ ಎಂದಿದ್ದರು. 158 ಕೋಟಿ ಖರ್ಚಾಗಿದೆ. ಆದರೆ, ಆ ವರದಿಯನ್ನೇ ಅಂಗೀಕರಿಸಿಲ್ಲ. ಅದು ಏನಾಗಿದೆ? ಇದು ಜನರ ಹಣ. ಸಿದ್ದರಾಮಯ್ಯರನ್ನು ಮೊದಲು ಬಂಧಿಸಿ. ಆಗ ಎಲ್ಲವೂ ಹೊರಗೆ ಬರುತ್ತದೆ. ಪುರಾವೆ ಇಲ್ಲದೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ನಿರುದ್ಯೋಗಿಯಾಗಿ ಬಹಳ ಬಿಡುವಾಗಿದ್ದಾರೆ. ಅವರ ಅಲೆಮಾರಿತನಕ್ಕೆ ನಾವೇನು ಮಾಡಲು ಸಾಧ್ಯ? ಅವರು ಕಂಗೆಟ್ಟು ಏನೇನೋ ಆಪಾದನೆ ಮಾಡುತ್ತಾರೆ. ಇದೊಂದು ಟೂಲ್ ಕಿಟ್. ಈ ಟೂಲ್ ಕಿಟ್ ಗೆ ನಾವು ಬೆದರುವುದಿಲ್ಲ. ಹೆದರುವವರೂ ಅಲ್ಲ; ಇದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿಯವರು ಯಾರ ಕಣ್ತಪ್ಪಿಸಿ ಎಲ್ಲೂ ಹೋಗಲಾಗುವುದಿಲ್ಲ. ಸಿಎಂ ಅವರು 24x7 ಕೆಲಸ ಮಾಡುತ್ತಾರೆ. ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಎಲ್ಲಿ ಇರುತ್ತಿದ್ದರೆಂದು ಎಲ್ಲರಿಗೂ ಗೊತ್ತಿದೆ. ಮುಕುಡಪ್ಪ ಅವರು ಎಲ್ಲ ಹೇಳಿದ್ದಾರೆ ಎಂದರು.

ಇದನ್ನೂ ಓದಿ:ಈ ಹಿಂದೆ ಕಾಂಗ್ರೆಸ್​ ಮಾಡಿದ್ದನ್ನೇ ಈಗ ಬಿಜೆಪಿ ಮಾಡುತ್ತಿದೆ.. ಸಚಿವರ ಬೇನಾಮಿ ಹೆಸರಿನಲ್ಲಿ ಆ ಕಂಪನಿ ಇದೆ: ಹೆಚ್​ಡಿಕೆ

ABOUT THE AUTHOR

...view details