ಕರ್ನಾಟಕ

karnataka

ETV Bharat / state

ಭಾರತದಲ್ಲೆಲ್ಲೂ ಗೋಚರಿಸದ ಚಂದ್ರ; ಮೇ 14ರಂದು ರಂಜಾನ್ ಆಚರಣೆಗೆ ಮನವಿ - ಪವಿತ್ರ ರಂಜಾನ್ ಉಪವಾಸ

ಕೊರೊನಾ ಹಿನ್ನೆಲೆ ಮನೆಯಲ್ಲಿ ರಂಜಾನ್ ಆಚರಣೆ ಮಾಡುವಂತೆ ಮರ್ಕಜ್​ ರುಯಾತ್-ಇ-ಹಿಲಾಲ್ ಸಂಘಟನಾ ಸಮಿತಿಯ ಅಧ್ಯಕ್ಷ ಮೌಲಾನಾ ಸಗೀರ್​ ಅಮೀದ್ ಖಾನ್ ರಷಿದ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Ramadan celebration on Friday, May 14th
ಸಂಗ್ರಹ ಚಿತ್ರ

By

Published : May 12, 2021, 10:12 PM IST

ಬೆಂಗಳೂರು: ಭಾರತದ ಯಾವ ಪ್ರದೇಶದಲ್ಲೂ ಚಂದ್ರನ ದರ್ಶನವಾಗದ ಹಿನ್ನೆಲೆಯಲ್ಲಿ ಮೇ 14ರ ಶುಕ್ರವಾರದಂದು ಪವಿತ್ರ ರಂಜಾನ್ ಆಚರಣೆ ಮಾಡುವುದಾಗಿ ಕರ್ನಾಟಕದ ಮರ್ಕಜ್​ ರುಯಾತ್-ಇ-ಹಿಲಾಲ್ ಸಂಘಟನಾ ಸದಸ್ಯರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ

ಮೇ 13 ಗುರುವಾರ ರಂಜಾನ್ ಆಚರಣೆಗೆ ಹಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ತೀರ್ಮಾನಿಸಿದ್ದವು. ಆದರೆ, ಭಾರತದ ಯಾವ ಭಾಗದಲ್ಲೂ ಚಂದ್ರನ ದರ್ಶನವಾಗದ ಹಿನ್ನೆಲೆ ಇಂದು ಸಭೆ ಸೇರಿದ ಮರ್ಕಜ್​ ರುಯಾತ್-ಇ-ಹಿಲಾಲ್ ಸಂಘಟನಾ ಸದಸ್ಯರು ಮೇ 14ರ ಶುಕ್ರವಾರ ರಂಜಾನ್ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details