ಕರ್ನಾಟಕ

karnataka

ETV Bharat / state

ದೆಹಲಿ ಪೊಲೀಸರು ಕಠಿಣ‌ ಕ್ರಮ ಕೈಗೊಳ್ಳದಿರಲು ಕಾರಣವೇನು?: ರಾಜೀವ್​ ಚಂದ್ರಶೇಖರ್ ಅಭಿಪ್ರಾಯ ಹೀಗಿದೆ ​ - Rajya Sabha member Rajiv Chandrasekhar

ದೆಹಲಿ ಪೊಲೀಸರು ಕಠಿಣ‌ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದಕ್ಕೆ ಮಂಗಳೂರು ಘಟನಾ ನಂತರದ ನ್ಯಾಯಿಕ ಪ್ರಕ್ರಿಯೆ ಕಾರಣವೆಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವೀಟ್​ ಮಾಡಿದ್ದಾರೆ.

Rajya Sabha member Rajiv Chandrasekhar
ರಾಜೀವ್ ಚಂದ್ರಶೇಖರ್

By

Published : Feb 26, 2020, 6:51 PM IST

ಬೆಂಗಳೂರು: ದೆಹಲಿ ಹಿಂಸಾಚಾರ ಪೂರ್ವ ನಿಯೋಜಿತ. 2019 ರ ಡಿಸೆಂಬರ್ 19 ರಂದು ಮಂಗಳೂರಲ್ಲಿ ನಡೆದ ಹಿಂಸಾಚಾರದ ರೀತಿಯಲ್ಲಿಯೇ ಈಗ ದೆಹಲಿಯಲ್ಲಿ ಘಟನೆ ನಡೆದಿದೆ. ಇದರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಅಂದು ಘಟನೆ ನಡೆದ ವೇಳೆ ಮಂಗಳೂರು ಪೊಲೀಸರು ದೃಢವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಈಗ ಪಿ.ಐ.ಎಲ್ ಸೇರಿದಂತೆ ನ್ಯಾಯಿಕ ಪ್ರಕ್ರಿಯೆಗಳನ್ನು‌ ಎದುರಿಸುತ್ತಿದ್ದಾರೆ. ಪ್ರಾಯಶಃ ಈಗ ದೆಹಲಿ ಘಟನೆ ವೇಳೆ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ದೆಹಲಿ ಪೊಲೀಸರ ಹಿಂದೇಟಿಗೆ ಇದೇ ಕಾರಣವಾಗಿರಬಹುದು ಎಂದು ರಾಜೀವ್​ ಚಂದ್ರಶೇಖರ್​ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details