ಕರ್ನಾಟಕ

karnataka

By

Published : Jul 26, 2019, 6:07 PM IST

ETV Bharat / state

ನೂತನ ಸಿಎಂ ಸ್ವಾಗತಕ್ಕೆ ಸಜ್ಜಾದ ರಾಜಭವನ... ಎಲ್ಲೆಲ್ಲೂ ಕೇಸರಿಮಯ

ಕೇವಲ ಹದಿನೈದು ನಿಮಿಷದ ಕಾರ್ಯಕ್ರಮಕ್ಕೆ ಎರಡು ಗಂಟೆಯ ಮುಂಚಿತವಾಗಿ ಅಭಿಮಾನಿಗಳು ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆಯುತ್ತಿದ್ದು, ರಾಜಭವನ ಕೆಸರಿಮಯವಾಗಿದೆ.

ರಾಜಭವನದ ಮುಂದೆ ಬಿಎಸ್​ವೈ ಅಭಿಮಾನಿಗಳು

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ ರಾಜಭವನಕ್ಕೆ ವಿಶೇಷ ಕಳೆ ಬಂದಿದೆ. ಸಂಜೆ 4 ಗಂಟೆಯಿಂದಲೇ ಬಿಎಸ್​ವೈ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸುತ್ತಿದ್ದು, ರಾಜಭವನ ಮಾರ್ಗ ಕೇಸರಿ ಮಯವಾಗಿದೆ.

ರಾಜಭವನದ ಮುಂದೆ ಬಿಎಸ್​ವೈ ಅಭಿಮಾನಿಗಳು

ಬಿಎಸ್​ವೈ ಪ್ರಮಾಣವಚನ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದ್ದು, ಕನಿಷ್ಠ ನಾಲ್ಕು ಸಾವಿರ ಜನರು ರಾಜಭವನ ಪ್ರವೇಶಿಸುವ ಸಾಧ್ಯತೆಗಳಿದೆ. ಇನ್ನೂ ಮುಖ್ಯರಸ್ತೆಯಲ್ಲಿ ಬೃಹತ್ ಎಲ್​ಇಡಿ ಪರದೆಯನ್ನು ಅಳವಡಿಸಲಾಗಿದ್ದು ಬಿಎಸ್​ವೈ ಅಭಿಮಾನಿಗಳ ವೀಕ್ಷಣೆಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ.

ಸಂಜೆ ಮುಖ್ಯಮಂತ್ರಿಯಾಗಿ ಬಿಎಸ್​ವೈ ಮಾತ್ರ ಪ್ರಮಾಣವಚನ ಸ್ವೀಕರಿಸುತ್ತಿದ್ದು ಯಾವುದೇ ಸಚಿವರಿಂದು ಪ್ರಮಾಣವಚನ ಸ್ವೀಕರಿಸುತ್ತಿಲ್ಲ, ಕೇವಲ ಹದಿನೈದು ನಿಮಿಷದ ಕಾರ್ಯಕ್ರಮಕ್ಕೆ ಎರಡು ಗಂಟೆಯ ಮುಂಚಿತವಾಗಿ ಅಭಿಮಾನಿಗಳು ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆಯುತ್ತಿದ್ದು, ರಾಜಭವನ ಕೇಸರಿಮಯವಾಗಿದೆ.

ABOUT THE AUTHOR

...view details