ಕರ್ನಾಟಕ

karnataka

By

Published : Aug 13, 2019, 7:53 PM IST

Updated : Aug 13, 2019, 11:27 PM IST

ETV Bharat / state

ಪ್ರಯಾಣಿಕರಲ್ಲಿ ದೇಶಭಕ್ತಿ ಹೆಚ್ಚಿಸಲು ಮುಂದಾದ ಭಾರತೀಯ ರೈಲ್ವೆ ಇಲಾಖೆ

ಜನರಲ್ಲಿ ದೇಶಭಕ್ತಿ ಹೆಚ್ಚಿಸಲು ಮತ್ತು ಪ್ರೇರೆಪಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​​​ಆರ್) ಬೆಂಗಳೂರು ಸಿಟಿ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ರಾಷ್ಟ್ರಧ್ವಜಗಳನ್ನು ಅಳವಡಿಸಲಾಗಿದೆ.

ವೈಭವ ಪ್ರೇರಿತ ಧ್ವಜ ನಿರ್ಮಾಣಕ್ಕೆ ಮುಂದಾದ ರೈಲ್ವೇ ಇಲಾಖೆ

ಬೆಂಗಳೂರು:ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದರೆ ಅದೇನೋ ಒಂದು ರೀತಿಯ ಧೈರ್ಯ, ಸಂತಸ. ಹೀಗಾಗಿಯೇ ಜನರಲ್ಲಿ ದೇಶಭಕ್ತಿ ಹೆಚ್ಚಿಸಲು ಮತ್ತು ಪ್ರೇರೆಪಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

ಪ್ರಯಾಣಿಕರಲ್ಲಿ ದೇಶಭಕ್ತಿ ಹೆಚ್ಚಿಸಲು ಮುಂದಾದ ಭಾರತೀಯ ರೈಲ್ವೆ ಇಲಾಖೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​​​ಆರ್) ಬೆಂಗಳೂರು ಸಿಟಿ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ​ ಉದ್ದದ ಸ್ತಂಭಗಳಲ್ಲಿ ಧ್ವಜಗಳನ್ನು ಅಳವಡಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿ ಇಂತಹ ಧ್ವಜಗಳನ್ನು ಅಳವಡಿಸಲು 75 ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಎರಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳು ಸೇರಿವೆ.

ಧ್ವಜವನ್ನೊಳಗೊಂಡು ಕಂಬದ ಎತ್ತರ 100 ಅಡಿ​ಗಳಾಗಿದ್ದು, ಇದನ್ನು ವೈಭವಪ್ರೇರಿತ ಧ್ವಜ ಎಂದು ಕರೆಯಲಾಗುತ್ತೆ. ಧ್ವಜವು 8 ಮೀಟರ್ ಎತ್ತರ ಹಾಗೂ 12 ಮೀಟರ್​​ ಉದ್ದವಾಗಿದೆ. ‌ಅಳವಡಿಕೆಯ ಅಂದಾಜು ವೆಚ್ಚವು ಪ್ರತಿಯೊಂದಕ್ಕೆ ಸುಮಾರು 10 ಲಕ್ಷ ರೂಪಾಯಿ ತಗುಲಿದೆ. ಈ ಧ್ವಜಗಳನ್ನು ಪ್ರಯಾಣಿಕರ ಆಗಮನ ಹಾಗೂ ನಿಗರ್ಮನದ ಸ್ಥಳಗಳಲ್ಲಿ ಅಳವಡಿಸಲಾಗಿದೆ.

Last Updated : Aug 13, 2019, 11:27 PM IST

ABOUT THE AUTHOR

...view details