ಕರ್ನಾಟಕ

karnataka

By

Published : Aug 16, 2021, 4:40 PM IST

ETV Bharat / state

ಬೆಂಗಳೂರಿನಲ್ಲಿ ಟಫ್​ ನಿಯಮ ಜಾರಿ ಕುರಿತು ಮೂರ್ನಾಲ್ಕು ದಿನಗಳಲ್ಲಿ ಚರ್ಚೆ: ಆರ್​​​​​​​ ಅಶೋಕ್​

ಸಾಲು - ಸಾಲು ಹಬ್ಬಗಳು ಬರಲಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸುವುದರ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ.

r ashok reaction on rules during festivals in bengaluru
ಸಚಿವ ಆರ್​ ಅಶೋಕ್​ ಹೇಳಿಕೆ

ಬೆಂಗಳೂರು:ನಗರದಲ್ಲಿ ಶ್ರಾವಣ ಶನಿವಾರ ಸೇರಿದಂತೆ, ಸಾಲು - ಸಾಲು ಹಬ್ಬಗಳು ಬರಲಿದ್ದು, ಖರೀದಿಗಾಗಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಲಿದೆ. ಹೀಗಾಗಿ ನಗರದಲ್ಲಿ ಕಠಿಣ ನಿಯಮಗಳು ಜಾರಿಯಾಗುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ.

ಸಚಿವ ಆರ್​ ಅಶೋಕ್​ ಹೇಳಿಕೆ

ಶ್ರಾವಣ ಶನಿವಾರ ಸೇರಿದಂತೆ ಮುಂದೆ ಎಲ್ಲ ಧರ್ಮಗಳ ಹಬ್ಬಗಳೂ ಬರಲಿವೆ. ನಗರದಲ್ಲಿ ಟಫ್ ರೂಲ್ಸ್ ಏನೇನು ತರಬೇಕು, ಹೇಗಿರಬೇಕೆಂಬ ನಿಯಮಗಳ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಸಿಎಂ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಗರದಲ್ಲಿ ಟಫ್ ರೂಲ್ಸ್ ತರಲೇಬೇಕಾಗುತ್ತದೆ. ಜನರ ಆರೋಗ್ಯ ಮುಖ್ಯ. ಹೀಗಾಗಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಲೆಗಳ ಆರಂಭದ ಕುರಿತು ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ವಿಭಾಗದವರು ತೀರ್ಮಾನಿಸುತ್ತಾರೆ. ಬೇರೆ ದೇಶಗಳಲ್ಲಿ ಶಾಲೆಗಳು ಮುಚ್ಚಿಲ್ಲ. ಇಲ್ಲಿ ಯಾವುದೇ ಶಾಲೆ ತೆರೆಯುವ ಮೊದಲು ಪೋಷಕರ ಒಪ್ಪಿಗೆ ಮುಖ್ಯ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಶಾಲೆ ಕಡ್ಡಾಯ ಇಲ್ಲ, ಆನ್​ಲೈನ್​ನಲ್ಲೆ ಶಿಕ್ಷಣ ಮುಂದುವರಿಸಬಹುದು ಎಂದರು.

ಇಂದಿರಾ ಕ್ಯಾಂಟೀನ್ ಹೆಸರಿನ ಬದಲಾವಣೆ ಚರ್ಚೆ ಬಗ್ಗೆ ಮಾತನಾಡಿ, 'ಅನ್ನಪೂರ್ಣೇಶ್ವರಿ' ಎಂದು ಬದಲಾಯಿಸಲು ಅಭಿಪ್ರಾಯ ಬಂದಿದೆ, ಆದರೆ ಚರ್ಚೆಯಾಗಿಲ್ಲ. ಯಾವುದೇ ತೀರ್ಮಾನ ಆಗಿಲ್ಲ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ವಿಸ್ತ್ರತ ಚರ್ಚೆಯಾಗಿದೆ. ಕೋವಿಡ್ ಏರಿಕೆಯಾಗುವ ಸಾಧ್ಯತೆ ಇದ್ದರೆ ಸರ್ಕಾರದ ಗಮನಕ್ಕೆ ತರಲಾಗುವುದು.‌ ಆಗ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

ABOUT THE AUTHOR

...view details