ಕರ್ನಾಟಕ

karnataka

ETV Bharat / state

'ಕೈ ಎತ್ತಿದರೂ ಸಹಿ ಹಾಕಿಲ್ಲ' ತೆನೆಹೊತ್ತ ಮಹಿಳಾ ಸದಸ್ಯರು... ಬಿಬಿಎಂಪಿ ಚುನಾವಣೆಯಲ್ಲಿ ಆಗಿದ್ದೇನು.?

ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜೆಡಿಎಸ್​ಗೆ ಬೇಸರ ಆಗಿದೆ. ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್​ ಪರ ಮತ ಹಾಕಿಲ್ಲ ಎಂದು ನೂತನ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

By

Published : Oct 2, 2019, 12:29 PM IST

ಬಿಬಿಎಂಪಿ ಚುನಾವಣೆ

ಬೆಂಗಳೂರು: ಮಂಗಳವಾರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಘೋಷಣೆ ಮಾಡಿದ್ದರೂ, ಕಡೇ ಕ್ಷಣದಲ್ಲಿ ಜೆಡಿಎಸ್​​ನ ಎಂಟು ಮಂದಿ ಮುಖಂಡರು ಮತದಾನ ಮಾಡದೇ ತಟಸ್ಥರಾಗಿದ್ದರು ಎನ್ನುವ ಈ ವಿಚಾರವನ್ನು ಸಿಎಂ ಬಿಎಸ್​ವೈ ಬಳಿ ಸಚಿವ ಅಶೋಕ್​ ಪ್ರಸ್ತಾಪಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಬಗ್ಗೆ ವಿವರಿಸುತ್ತಿರುವ ಸಚಿವ ಅಶೋಕ್

ಎಂಟು ಜನ ಬಿಜೆಪಿ ಪರ ವೋಟ್ ಹಾಕಿದ್ರು. ಜೆಡಿಎಸ್​​ನ 14 ಜನರಲ್ಲಿ 8 ಜನ ಬಿಜೆಪಿ ಪರ ಮತ ಹಾಕಿದ್ದರು. ಇದು ಸಹಜವಾಗಿಯೇ ಎಲ್ಲರಿಗೂ ಆಶ್ಚರ್ಯ ಆಯಿತು. ಕೈ ಎತ್ತಿದ್ದರೂ ಸಹ, ಸಹಿ ಹಾಕಲಿಲ್ಲ. ಮಾರ್ಜಿನ್​​​ನಲ್ಲೇ ಗೆಲ್ಲಬೇಕು ಅಂತ ತಲೆಯಲ್ಲಿ ಲೆಕ್ಕ ಹಾಕಿದ್ದೆವು. 4- 5ರಲ್ಲಿ ಗೆಲ್ಲಬೇಕು ಅಂತ ತಲೆಯಲ್ಲಿ ಇತ್ತು. ಕಡೆಗೆ ಜೆಡಿಎಸ್ ಮನವೊಲಿಸಿ 27 ಮತಗಳ ಬಹುಮತದಿಂದ ಗೆದ್ದೆವು ಎಂದು ಸಚಿವ ಅಶೋಕ್ ಸಿಎಂ ಬಳಿ ವಿವರಿಸಿದ್ದಾರೆ.

ಮೇಯರ್​​ - ಉಪ ಮೇಯರ್​ಗೆ ಸಿಎಂ ಶುಭಾಶಯ: ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಹಾಗೂ ಉಪಮೇಯರ್ ರಾಮ್ ಮೋಹನ್ ರಾಜ್​​ಗೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಅಭಿನಂದನೆ ಸಲ್ಲಿಸಿದರು.

ಮೇಯರ್-ಉಪಮೇಯರ್​ಗೆ ಸಿಎಂ ಶುಭಾಶಯ

ಬಳಿಕ ಮಾತನಾಡಿದ ಸಿಎಂ ಬಿಎಸ್​ವೈ ಪಾಲಿಕೆಯ ಕಳೆದ ನಾಲ್ಕು ವರ್ಷದಲ್ಲಿ ಏನೆಲ್ಲ ಹಗರಣ ನಡೆದಿದೆ ಅವುಗಳನ್ನು ಬಹಿರಂಗ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇದರಿಂದ ಇನ್ನೊಂದು ವರ್ಷದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ 150 ಸೀಟ್ ಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಈ ಜವಾಬ್ದಾರಿ ಇವರಿಬ್ಬರ ಮೇಲಿದೆ ಎಂದರು. ಬಿಬಿಎಂಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಶೋಕ್, ವಿಶ್ವನಾಥ್ ಅವರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಬಿಜೆಪಿಗೆ ಮತ:ಕಡೆ ಕ್ಷಣದಲ್ಲಿ ಬಿಜೆಪಿ , ಜೆಡಿಎಸ್ ಮುಖಂಡರಿಗೆ ಆಮಿಷ ಒಡ್ಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಮೇಯರ್ ಉತ್ತರಿಸಿ ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜೆಡಿಎಸ್​ಗೆ ಬೇಸರ ಆಗಿದೆ. ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್​ ಪರ ಮತ ಹಾಕಿಲ್ಲ ಎಂದರು.

ನೂತನ ಮೇಯರ್ ಗೌತಮ್ ರಾಜ್

ABOUT THE AUTHOR

...view details