ಬೆಂಗಳೂರು: ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಲು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜತೆ ಕಾಣಿಸಿಕೊಳ್ಳಬೇಕೆಂಬ ತವಕದಿಂದ ಕೈ ಕಾರ್ಯಕರ್ತರು ಜಗಳವಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಪ್ರಚಾರಕ್ಕಾಗಿ ಬೀದಿ ಜಗಳ: ಕೈ ಕಾರ್ಯಕರ್ತರಿಬ್ಬರ ರಂಪಾಟ - undefined
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಭೆ ಬಳಿಕ ದಿನೇಶ್ ಗುಂಡೂರಾವ್ ಮಾಧ್ಯಮದವರೊಂದಿಗೆ ಸಭೆ ನಡೆಸಿ ಮುಖ್ಯಾಂಶಗಳನ್ನು ವಿವರಿಸಿದ್ದಾರೆ. ಅವರ ಜತೆ ಕಾಣಿಸಿಕೊಳ್ಳಬೇಕು ಎಂಬ ಹಂಬಲದಿಂದ ಇಬ್ಬರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಕಾಂಗ್ರೆಸ್ ನಾಯಕರ ಜತೆ ಕಾಣಿಸಿಕೊಳ್ಳಲು ಬೀದಿ ಜಗಳಕ್ಕೆ ನಿಂತ ಕಾರ್ಯಕರ್ತರು
ಈ ವಿಷಯವಾಗಿ ಬಿರುಸಿನ ಮಾತಿನ ಚಕಮಕಿ ನಡೆಯಿತು. ಪ್ರತಿ ಭಾರಿಯು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದೀರಾ. ನಮಗೂ ಅವಕಾಶ ಕೊಡಿ ಎಂದು ಕಾರ್ಯಕರ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ವಿವರವನ್ನು ಮಾಧ್ಯಮದರಿಗೆ ತಿಳಿಸಿ ದಿನೇಶ್ ಗುಂಡೂರಾವ್ ಅಲ್ಲಿಂದ ಹೊರಡುತ್ತಿದ್ದಂತೆ, ಇತ್ತ ಕಾರ್ಯಕರ್ತರ ಮುನಿಸು ಹೆಚ್ಚಾಗಿದೆ. ಪ್ರತಿ ಭಾರಿಯು ನೀನೇ ಕಾಣಿಸಿಕೊಳ್ಳಬೇಕು ಎಂದರೆ ನಿನ್ನದೇ ಚಾನಲ್ವೊಂದನ್ನು ಪ್ರಾರಂಭಿಸು ಎಂದು ಪರಸ್ಪರ ಕಾರ್ಯಕರ್ತರು ರೇಗಿದ್ದಾರೆ.