ಕರ್ನಾಟಕ

karnataka

ETV Bharat / state

ಸರ್ಜಾಪುರದ ರೇಷ್ಮೆ ಬೆಳೆಗಾರರ ಚುನಾವಣೆ ಮುಂದೂಡಲು ಆಗ್ರಹ.. - ಸರ್ಜಾಪುರದ ರೇಷ್ಮೆ ಬೆಳೆಗಾರರ ಪ್ರತಿಭಟನೆ

ಸರ್ಜಾಪುರದಲ್ಲಿ ನಡೆದ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಹಾಗೂ ರೈತರ ಸೇವಾ ಸಹಕಾರ ಸಂಘ ಚುನಾವಣೆ ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯ್ತು.

protest to postpone election in sarjapur
ಚುನಾವಣೆ ಮುಂದೂಡುವಂತೆ ಆಗ್ರಹ

By

Published : Feb 24, 2020, 12:21 PM IST

ಆನೇಕಲ್​​/ಬೆಂಗಳೂರು :ಸರ್ಜಾಪುರದಲ್ಲಿ ನಡೆದ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಹಾಗೂ ರೈತರ ಸೇವಾ ಸಹಕಾರ ಸಂಘ ಚುನಾವಣೆ ಗೊಂದಲದ ಗೂಡಾಗಿದೆ ಎಂದು ಪ್ರತಿಭಟನೆ ನಡೆಯಿತು.

ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಚುನಾವಣೆ ಮುಂದೂಡಬೇಕೆಂದು ಆನೇಕಲ್ ಶಾಸಕ ಬಿ. ಶಿವಣ್ಣ ನೇತೃತ್ವದ ಗುಂಪು ಪಟ್ಟು ಹಿಡಿದಿದೆ. ಚುನಾವಣೆಯಲ್ಲಿ ಬಿಜೆಪಿಯ ಕೆಲ ಪ್ರಭಾವಿಗಳು ಉಚ್ಛ ನ್ಯಾಯಾಲಯದಿಂದ 700 ಮತದಾರರನ್ನು ಕಳೆದ 18 ರಂದು ಪಟ್ಟಿಯಲ್ಲಿ ಸೇರಿಸಲು ಆದೇಶ ಮಾಡಲಾಗಿದೆ. ಚುನಾವಣಾಧಿಕಾರಿಗಳಿಗೆ ಆ ಪ್ರತಿಯನ್ನು ಸಲ್ಲಿಸಿ ವಂಚಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಗಳು ದೂರಿದ್ದಾರೆ. ಕಳೆದ 18 ರಂದು ಆದೇಶವಾದ ಪ್ರತಿ ಬಗ್ಗೆ ಯಾರಿಗೂ ತಿಳಿಸದೇ ಕೆಲ ಪ್ರಭಾವಿಗಳೇ ಕೋರ್ಟಿನಿಂದ ಪಡೆದು ಮೊದಲೇ ನೀಡುವ ಅಗತ್ಯವೇನಿತ್ತು ಎಂದು ಶಾಸಕ ಬಿ. ಶಿವಣ್ಣ ಪ್ರಶ್ನಿಸಿದ್ದಾರೆ.

ಚುನಾವಣೆ ಮುಂದೂಡುವಂತೆ ಆಗ್ರಹ

ಒಟ್ಟು 13 ಸ್ಥಾನಗಳನ್ನು ಹೊಂದಿರುವ ಸಹಕಾರ ಸಂಘದಲ್ಲಿ ದಶಕದಿಂದ ಬಿಜೆಪಿಯೇ ಗೆದ್ದು ಅಧಿಕಾರ ನಡೆಸಿ ನಾಲ್ಕೈದು ಶಾಖೆಗಳನ್ನು ತೆರೆದು ಒಂದೂವರೆ ಕೋಟಿಗೂ ಅಧಿಕ ಲಾಭವನ್ನು ಗಳಿಸಿದೆ. ಕಾಂಗ್ರೆಸ್ ಮತದಾರರು ವಿರಳವಾಗಿರುವ ಸಂಘದಲ್ಲಿ ಚುನಾವಣೆಗೆ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎಂದು ಬಿಜೆಪಿಗರು ಹೇಳುತ್ತಾರೆ. ಸಂಘದ ಸುಪರ್ದಿಗೆ 4000 ಮತದಾರರಿದ್ದು, ಇದೀಗ ಈ ಸಂಖ್ಯೆ 2089ಕ್ಕೆ ಏರಿದೆ.

ಚುನಾವಣೆ ಮುಂದೂಡಲೇಬೇಕು, ಇಲ್ಲವಾದರೆ ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟಿಸಿ ಚುನಾವಣಾಧಿಕಾರಿಗಳಿಂದ ಹಿಂಬರಹ ಪಡೆದು ಹೈಕೋರ್ಟ್‌ಗೆ ಅರ್ಜಿ ಹಾಕಲು ಬಿ. ಶಿವಣ್ಣ ತೆರಳಿದ್ದಾರೆ.

ABOUT THE AUTHOR

...view details