ಕರ್ನಾಟಕ

karnataka

By

Published : Feb 11, 2022, 5:14 PM IST

ETV Bharat / state

ಸಾಗರ: ಪ್ರತಿಭಟನಾ ನಿರತೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ..

ಕೆಳದಿ ಗ್ರಾಮದ ಕೆನರಾ ಬ್ಯಾಂಕ್​ಗೆ ಕಳೆದ ಹತ್ತಾರು ವರ್ಷಗಳಿಂದ ಬ್ಯಾಂಕ್ ಮಿತ್ರ ಎಂಬ ಹುದ್ದೆ ಸೃಷ್ಟಿಸಲಾಗಿತ್ತು.‌ ಇವರು ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

protest-girl-suicide-in-shivamogga
ಪ್ರತಿಭಟನಾ ನಿರತೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ: ಉದ್ಯೋಗದಿಂದ ತೆಗೆದು ಹಾಕಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಾಗರದ ಕೆಳದಿ ಗ್ರಾಮದಲ್ಲಿ ನಡೆದಿದೆ. ಕೆಳದಿ ಗ್ರಾಮದ ಕೆನರಾ ಬ್ಯಾಂಕ್​ಗೆ ಕಳೆದ ಹತ್ತಾರು ವರ್ಷಗಳಿಂದ ಬ್ಯಾಂಕ್ ಮಿತ್ರ ಎಂಬ ಹುದ್ದೆಯನ್ನು ಸೃಷ್ಟಿಸಲಾಗಿತ್ತು.‌

ಇವರು ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬ್ಯಾಂಕ್​ಗಳಲ್ಲಿ ಹೊಸ ಗ್ರಾಹಕರನ್ನು ಹುಡುಕಿ ಖಾತೆ ತೆರೆಯುವುದು ಸೇರಿದಂತೆ ಬ್ಯಾಂಕ್ ವ್ಯವಹಾರದ ಲಾಭಗಳನ್ನು ಜನ ಸಾಮಾನ್ಯರಿಗೆ ತಿಳಿಸಿ, ಗ್ರಾಹಕರನ್ನಾಗಿ ಮಾಡುವ ಉದ್ಯೋಗ ಮಾಡುತ್ತಿದ್ದರು.

ಹೀಗೆ ಕೆಲಸ ಮಾಡುತ್ತಿದ್ದವರನ್ನು ಬ್ಯಾಂಕ್ ಸಿಬ್ಬಂದಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿದನ್ನು ವಿರೋಧಿಸಿ ಬ್ಯಾಂಕ್ ಮಿತ್ರ ನೌಕರರು ನಿನ್ನೆಯಿಂದ ಬ್ಯಾಂಕ್ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಇಂದು ಧರಣಿ 2ನೇ ದಿನಕ್ಕೆ ಕಾಲಿಟ್ಟಿತ್ತು.

ಧರಣಿ ನಿರತರು ಧರಣಿ ನಡೆಸುವಾಗ ಶಂಕುತಲಾ ಎಂಬುವರು ತಮ್ಮ ಬ್ಯಾಗ್ ನಿಂದ ವಿಷದ ಬಾಟಲಿ ತೆಗೆದು ಕುಡಿಯಲು ಯತ್ನಿಸಿದಾಗ ಶಂಕುತಲಾ ಅವರ ಪಕ್ಕದಲ್ಲಿಯೇ ಇದ್ದ ಮಹಿಳೆಯೊಬ್ಬರು ವಿಷದ ಬಾಟಲಿಯನ್ನು ಕಿತ್ತು ಬಿಸಾಡುತ್ತಾರೆ.

ಶಂಕುತಲಾ ಅವರ ಮೇಲೆಲ್ಲಾ ವಿಷ ಚೆಲ್ಲಿದ್ದರಿಂದ ಅವರನ್ನು ಸಾಗರ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಓದಿ:ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?.. ನಿನ್ನೆ ಒಂದೇ ದಿನ ಮೂರು ಕಡೆ ಸರಗಳ್ಳತನ

ABOUT THE AUTHOR

...view details