ಕರ್ನಾಟಕ

karnataka

By

Published : Nov 1, 2020, 8:40 PM IST

Updated : Nov 1, 2020, 9:52 PM IST

ETV Bharat / state

ಕನ್ನಡಿಗರಿಗಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.

protest for demands sarojini maharshi naydu report implimintation
ಸರೋಜಿನಿ ಮಹರ್ಷಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು:ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿಗೆ ಒಂದು ವರ್ಷ ಕಾಲಾವಕಾಶ ಕೇಳಿತ್ತು. ಮುಖ್ಯಮಂತ್ರಿಗಳು ಕೇಳಿರುವ ಅವಧಿ ಮುಗಿದಿದೆ. ಇನ್ನಾದರೂ ಡಾ.‌ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ನಗರದ ಟೌನ್ ಹಾಲ್​ನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರೋಜಿನಿ ಮಹರ್ಷಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಈ ವೇಳೆ ಮಾತನಾಡಿದ, ಸಂಘದ ರಾಜ್ಯಾಧ್ಯಕ್ಷ ಎಸ್ ರಾಘವೇಂದ್ರ ಗೌಡ, ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ, ಕಳೆದ ವರ್ಷ ನವೆಂಬರ್ ನಲ್ಲಿ ಹೋರಾಟ ಪ್ರಾರಂಭ ಮಾಡಿ ಫೆಬ್ರವರಿ 13 ರವರೆಗೂ 108 ದಿನ ಪ್ರತಿಭಟನೆ ಮಾಡಿದ್ದೆವು. ಒಂದು ವರ್ಷ ಕಾಲಾವಕಾಶ ಮುಖ್ಯಮಂತ್ರಿ ಯಡಿಯೂರಪ್ಪ ಕೇಳಿದ್ರು. ಈಗಾಗಲೇ ಕೊರೊನಾ ವೈರಸ್​ಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ.‌ ಕರ್ನಾಟಕದಲ್ಲಿ ಕನ್ನಡಿಗರಿಗೆ ರಾಜ್ಯ ಪ್ರಾಶಸ್ತ್ಯ ಕೊಡ್ಬೇಕು, ಉದ್ಯೋಗ ಕೊಡಬೇಕು. ಕನ್ನಡದ ಮಕ್ಕಳಿಗೆ 80% ಉದ್ಯೋಗ ಸಿಗಬೇಕು ಎಂದು ಒತ್ತಾಯಿಸಿದರು.

Last Updated : Nov 1, 2020, 9:52 PM IST

ABOUT THE AUTHOR

...view details