ಕರ್ನಾಟಕ

karnataka

By

Published : Sep 5, 2020, 4:43 PM IST

ETV Bharat / state

ಶಿಕ್ಷಕರ ದಿನದಂದೇ ಬೀದಿಗಿಳಿದ ಖಾಸಗಿ ಶಾಲಾ ಶಿಕ್ಷಕರು.. ಕಪ್ಪುಪಟ್ಟಿ ಧರಿಸಿ ಧರಣಿ..

ಶಾಲೆಗಳು ಆರಂಭವಾಗದ ಕಾರಣ ತಿಂಗಳ ವೇತನಕ್ಕೆ ಕತ್ತರಿ ಬಿದ್ದಿದೆ. ಕೇಂದ್ರ ಸರ್ಕಾರ ಆನ್‌ಲಾಕ್ 4 ಜಾರಿ ಮಾಡಿದ್ರೂ ಸಹ ಇನ್ನೂ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ನಡುವೆ ಆನ್​ಲೈನ್ ಬೋಧನೆ ಮಾಡಲಾಗುತ್ತಿದೆ..

private school Teachers held protest in Bangalore
ಖಾಸಗಿ ಶಾಲಾ ಶಿಕ್ಷಕರಿಂದ ಪ್ರತಿಭಟನೆ

ಬೆಂಗಳೂರು :ಕೊರೊನಾ ಕಾರಣಕ್ಕೆ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರು ಶಿಕ್ಷಕರ ದಿನದಂದೇ ಬೀದಿಗಿಳಿದು ಧರಣಿ ನಡೆಸಿದರು.

ಖಾಸಗಿ ಶಾಲಾ ಶಿಕ್ಷಕರಿಂದ ಪ್ರತಿಭಟನೆ

ಕೈಗೆ ಕಪ್ಪು ಪಟ್ಟಿ ಧರಿಸಿ ನಗರದ ಶಿಕ್ಷಣ ಸದನದಲ್ಲಿ ನಾಮಫಲಕ ಹಿಡಿದು ಸಚಿವರ ಗಮನ ಸೆಳೆದರು. ಕೊರೊನಾ ವೈರಸ್​ನಿಂದಾಗಿ ಶಿಕ್ಷಣ ಸಂಸ್ಥೆಗಳು, ಬೋಧಕ- ಬೋಧಕೇತರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕುವಂತಾಯಿತು.

ಶಾಲೆಗಳು ಆರಂಭವಾಗದ ಕಾರಣ ತಿಂಗಳ ವೇತನಕ್ಕೆ ಕತ್ತರಿ ಬಿದ್ದಿದೆ. ಕೇಂದ್ರ ಸರ್ಕಾರ ಆನ್‌ಲಾಕ್ 4 ಜಾರಿ ಮಾಡಿದ್ರೂ ಸಹ ಇನ್ನೂ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ನಡುವೆ ಆನ್​ಲೈನ್ ಬೋಧನೆ ಮಾಡಲಾಗುತ್ತಿದೆ. ಆದರೆ, ಹಲವು ಶಿಕ್ಷಕರು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಶಿಕ್ಷಣ ಬಿಟ್ಟು ಬೇರೆ ವ್ಯಾಪಾರ ಮಾಡುವಂತಾಗಿದೆ ಎಂದು ತಮ್ಮ ನೊವು ತೋಡಿಕೊಂಡಿದ್ದಾರೆ.

ABOUT THE AUTHOR

...view details