ಕರ್ನಾಟಕ

karnataka

ETV Bharat / state

ಐಸೋಲೇಟೆಡ್​ ವಾರ್ಡ್​ ನಿರ್ಮಾಣಕ್ಕೆ ಘೋಷಣೆಯಾಗದ ಅನುದಾನ: ಮೋದಿ ಭಾಷಣದ ಕುರಿತು ಖಾದರ್​ ನಿರಾಸೆ - ಪ್ರಧಾನಿ ಭಾಷಣ ನಿರಾಸೆ ಮೂಡಿಸಿದ ಪ್ರಧಾನಿ ಭಾಷಣ

ನಿನ್ನೆ ನರೇಂದ್ರ ಪ್ರಧಾನಿ ಮೋದಿಯವರು ಮಾಡಿದ ಭಾಷಣ ನಿರಾಸೆ ಮೂಡಿಸಿದೆ. ರಾಜ್ಯ ಸರ್ಕಾರಕ್ಕೆ ಹೆಚ್ಚಿನ ವಾರ್ಡ್​ ನಿರ್ಮಿಸಲು ಅನುದಾನ ಕೊಡಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್​ ತಿಳಿಸಿದ್ದಾರೆ.

Khadar
ಯು.ಟಿ ಖಾದರ್

By

Published : Mar 20, 2020, 3:31 PM IST

ಬೆಂಗಳೂರು :ಪ್ರಧಾನಿ ಅವರ ಭಾಷಣದ ಮೇಲೆ ಬಹಳ ನಿರೀಕ್ಷೆ ಇತ್ತು. ಆದರೆ ಆ ಕುರಿತು ಈಗ ನಿರಾಸೆಯಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದರು.

ಮಾಜಿ ಸಚಿವ ಯು.ಟಿ ಖಾದರ್

ವಿಧಾನಸೌಧದ ಬಳಿ ಮಾತನಾಡಿದ ಅವರು, ಕೊರೊನಾ ವೈರಸ್​ ನಿಂದ ಜನ ದೂರ ಇರಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಯಾವ ರೀತಿ ಐಸೋಲೇಟೆಡ್ ವಾರ್ಡ್ ವ್ಯವಸ್ಥೆ ಮಾಡಬಹುದು? ಕೇಂದ್ರದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುತ್ತಾರಾ ಎಂದು ಕಾಯುತ್ತಿದ್ದೆವು. ಆದರೆ ಭಾಷಣ ಕೇಳಿದ ಮೇಲೆ ಬೇಸರವಾಗಿದೆ ಎಂದು ಹೇಳಿದರು.

ಎಲ್ಲಾ ಬಾಡಿಗೆದಾರರಿಗೆ ಶೇ.25 ಬಾಡಿಗೆ ಕಡಿಮೆ ಮಾಡಬೇಕು. ವೃದ್ದರು, ಮಹಿಳೆಯರಿಗೆ ವಾರ ಕಳೆಯಲು ಬೇಕಾದ ದಿನ ಬಳಕೆ ವಸ್ತು ಪೂರೈಕೆ ಮಾಡಬೇಕು. ಮಾರ್ಚ್​ 22 ರ ನಂತರ ಅಂತಾರಾಷ್ಟ್ರೀಯ ವಿಮಾನ ಬಂದ್ ಮಾಡಿದ್ರೆ ಏನು ಪ್ರಯೋಜನ. ಅಷ್ಟರಲ್ಲಿ ಸೋಂಕಿತರು ಎಲ್ಲರು ಬಂದು ಬಿಡುತ್ತಾರೆ. ಕೂಲಿ ಕಾರ್ಮಿಕರು , ಕಷ್ಟದಲ್ಲಿರುವವರಿಗೆ ಸಹಾಯ ಆಗುವಂತೆ ಮಾಡಬೇಕು. ಜೊತೆಗೆ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಇಲ್ಲೂ ಯೋಜನೆ ರೂಪಿಸಬೇಕು. ಜನ ಸಾಮಾನ್ಯರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳಬೇಕು ಎಂದರು.

ABOUT THE AUTHOR

...view details