ಕರ್ನಾಟಕ

karnataka

'ಶೀಲಂ ಪರಮ ಭೂಷಣಂ' ಧ್ಯೇಯವಾಕ್ಯ ಕೆಡೆಟ್‌ಗಳಿಗೆ ಮಾರ್ಗದರ್ಶಕ ಜ್ಯೋತಿ: ರಾಷ್ಟ್ರಪತಿ

ಈ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಇರುವ ರಾಷ್ಟ್ರೀಯ ಮಿಲಿಟರಿ ಶಾಲೆಗಳಿಗೆ ಬಾಲಕಿಯರ ಕೆಡೆಟ್‌ಗಳು ಪ್ರವೇಶ ಪಡೆಯಲಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಹಲವಾರು ಮೈಲಿಗಳನ್ನು ದಾಟಿ ವಿವಿಧ ಕ್ಷೇತ್ರಗಳಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿ ದೇಶವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.

By

Published : Jun 13, 2022, 10:01 PM IST

Published : Jun 13, 2022, 10:01 PM IST

ಶೀಲಂ ಪರಮ ಭೂಷಣಂ ಧ್ಯೇಯ ವಾಕ್ಯ ಕೆಡೆಟ್‌ಗಳಿಗೆ ಮಾರ್ಗದರ್ಶಕ ಜ್ಯೋತಿಯಾಗಿದೆ ಎಂದ ರಾಷ್ಟ್ರಪತಿ
ಶೀಲಂ ಪರಮ ಭೂಷಣಂ ಧ್ಯೇಯ ವಾಕ್ಯ ಕೆಡೆಟ್‌ಗಳಿಗೆ ಮಾರ್ಗದರ್ಶಕ ಜ್ಯೋತಿಯಾಗಿದೆ ಎಂದ ರಾಷ್ಟ್ರಪತಿ

ಬೆಂಗಳೂರು: 'ಶೀಲಂ ಪರಮ ಭೂಷಣಂ' ಧ್ಯೇಯ ವಾಕ್ಯ ಕೆಡೆಟ್‌ಗಳಿಗೆ ಯಾವಾಗಲೂ ಮಾರ್ಗದರ್ಶಕ ಜ್ಯೋತಿಯಾಗಿ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಸೋಮವಾರ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಉದ್ಘಾಟಿಸಿ ಶಾಲೆಯ ಪ್ಲಾಟಿನಂ ಜ್ಯುಬಿಲಿ ಆಚರಣೆ ಉದ್ದೇಶಿಸಿ ಅವರು ಮಾತನಾಡಿದರು. ಸ್ಥಾಪನೆಯಾದಾಗಿನಿಂದ ಶಾಲೆಯು ಬಹಳ ದೂರ ಸಾಗಿ ಬಂದಿದೆ ಮತ್ತು ದೇಶದ ಅತ್ಯುತ್ತಮ ಬೋರ್ಡಿಂಗ್ ಶಾಲೆಗಳಲ್ಲಿ ಒಂದಾಗಿದೆ. ಪ್ರಸ್ತುತ 23 ರಾಜ್ಯಗಳ ಕೆಡೆಟ್‌ಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ಶಾಲೆ ಏಕತೆಯನ್ನು ಪ್ರತಿನಿಧಿಸುತ್ತದೆ:ಜಮ್ಮು ಮತ್ತು ಕಾಶ್ಮೀರದಿಂದ ಕೇರಳದವರೆಗೆ ಈ ಶಾಲೆಯ ಕೆಡೆಟ್‌ಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುತ್ತಾರೆ ಎಂದು ಹೊಗಳಿದರು. ಈ ಪರಸ್ಪರ ಬೆರೆಯುವಿಕೆಯು ಕೆಡೆಟ್‌ಗಳಿಗೆ ತಮ್ಮ ಸಹಪಾಠಿಯ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳನ್ನು ಕಲಿಯಲು ಮತ್ತು ಪ್ರಶಂಸಿಸಲು ಸಹಾಯ ಮಾಡಿದೆ ಎಂದು ಸಂತಸಗೊಂಡರು.


ಬಾಲಕಿಯರ ಪ್ರವೇಶ:ಈ ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಇರುವ ರಾಷ್ಟ್ರೀಯ ಮಿಲಿಟರಿ ಶಾಲೆಗಳಿಗೆ ಬಾಲಕಿಯರ ಕೆಡೆಟ್‌ಗಳು ಪ್ರವೇಶ ಪಡೆಯಲಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಹಲವಾರು ಮೈಲಿಗಳನ್ನು ದಾಟಿ ವಿವಿಧ ಕ್ಷೇತ್ರಗಳಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿ ದೇಶವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ ಎಂದರು.

ಯುದ್ಧ ಪ್ರದೇಶದಲ್ಲಿ ಮಹಿಳೆಯರು: ಸರ್ವೋಚ್ಚ ಕಮಾಂಡರ್ ಆಗಿ, ಯುದ್ಧದ ಪ್ರದೇಶಗಳನ್ನು ಒಳಗೊಂಡಂತೆ ಸಶಸ್ತ್ರ ಪಡೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಸಂಖ್ಯೆಯನ್ನು ನೋಡಲು ಸಂತೋಷವಾಗುತ್ತದೆ ಎಂದ ಅವರು, ಈ ಪ್ರತಿಷ್ಠಿತ ಶಾಲೆಗೆ ಸೇರುವ ಕೆಡೆಟ್‌ಗಳು ರಾಷ್ಟ್ರವನ್ನು ರಕ್ಷಿಸುವಲ್ಲಿ ಕೊಡುಗೆ ನೀಡುತ್ತಾರೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಕೆಡೆಟ್‌ಗಳಿಗೆ ಸಮಗ್ರ ಶಿಕ್ಷಣವನ್ನು ನೀಡುವುದನ್ನು ಮುಂದುವರಿಸುತ್ತದೆ, ಮಿಲಿಟರಿ ನೀತಿ ಮತ್ತು ಶಿಸ್ತನ್ನು ಬೆಳೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಭಾಗವಹಿಸಿದ್ದರು.

ಇದನ್ನೂ ಓದಿ:ಕಾಳಿಯಮ್ಮನ ಉತ್ಸವದ ವೇಳೆ ಮುರಿದು ಬಿದ್ದ ರಥ; ಮೂವರು ಸಾವು

For All Latest Updates

TAGGED:

ABOUT THE AUTHOR

...view details