ಕರ್ನಾಟಕ

karnataka

By

Published : May 16, 2022, 7:02 PM IST

Updated : May 16, 2022, 7:20 PM IST

ETV Bharat / state

ಕಮಲ್ ಪಂತ್ ವರ್ಗಾವಣೆ.. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ‌ ಪ್ರತಾಪ್ ರೆಡ್ಡಿ ನೇಮಕ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ‌ದ್ದ ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

pratap-reddy-appointed-as-bengaluru-city-police-commissioner
ಕಮಲ್ ಪಂತ್ ವರ್ಗಾವಣೆ.. ನಗರ ಪೊಲೀಸ್ ಆಯುಕ್ತರಾಗಿ‌ ಪ್ರತಾಪ್ ರೆಡ್ಡಿ ನೇಮಕ

ಬೆಂಗಳೂರು:ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ‌ ಪ್ರತಾಪ್ ರೆಡ್ಡಿ ನೇಮಕವಾಗಿದ್ದಾರೆ. ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

1991ನೇ ಬ್ಯಾಚ್​​ನ ಐಪಿಎಸ್​​ ಅಧಿಕಾರಿಯಾಗಿರುವ ಪ್ರತಾಪ್ ರೆಡ್ಡಿ, ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದಾರೆ.‌‌ ಹಾಸನದಲ್ಲಿ ಎಎಸ್​​ಪಿಯಾಗಿ ಕರ್ನಾಟಕ ಕೇಡರ್​​ನಲ್ಲಿ ಸೇವೆ ಆರಂಭಿಸಿದ್ದರು. 1994ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಪ್ರತಾಪ್ ರೆಡ್ಡಿ ಡೈರೆಕ್ಟರ್ ಆಫ್ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಇನಿಶಿಯೇಟಿವ್ ಆಗಿದ್ದರು.

ಕಲಬುರಗಿ, ವಿಜಯಪುರ, ಮುಂಬೈ, ಬೆಂಗಳೂರು ಸಿಬಿಐ ಘಟಕ ಹಾಗೂ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಅವರಿಗಿದೆ. ಪ್ರಸ್ತುತ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.

ಐಪಿಎಸ್​ ಅಧಿಕಾರಿಗಳ ವರ್ಗಾವಣೆ

ಸುಮಾರು ಮೂರು ದಶಕಗಳ ಅನುಭವವಿರುವ ಪ್ರತಾಪ್ ರೆಡ್ಡಿ, ದಕ್ಷ ಹಾಗೂ ಪ್ರಾಮಾಣಿಕತೆ ಹೆಸರಾಗಿದ್ದಾರೆ. ಇದೀಗ ಬೆಂಗಳೂರು ನಗರಕ್ಕೆ ಆಯುಕ್ತರಾಗಿ ನೇಮಕವಾಗಿದ್ದು, ಅವರ ಮೇಲಿನ‌ ಜವಾಬ್ದಾರಿ ಇಮ್ಮಡಿಯಾಗಿದೆ‌. ನಾಳೆ ಬೆಳಗ್ಗೆ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಬಳಿಕ 2020ರ ಆಗಸ್ಟ್ ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಕಮಲ್ ಪಂತ್ ಇಲಾಖೆಯಲ್ಲಿ ಗಮನಾರ್ಹ ಸುಧಾರಣೆ ಮಾಡಿದ್ದರು. ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿಯಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ 1 ವರ್ಷ 9 ತಿಂಗಳು ಕಾಲ ಅವರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದಂತಾಗಿದೆ.

ಐವರು ಅಧಿಕಾರಿಗಳ ವರ್ಗಾವಣೆ:ಪ್ರತಾಪ್ ರೆಡ್ಡಿ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌.‌‌ ಪ್ರತಾಪ್ ರೆಡ್ಡಿ, ಕಮಲ್‌ ಪಂತ್ ಜೊತೆಗೆ ಆರ್. ಹಿತೇಂದ್ರ ಅವರು ಕೆಎಸ್ಆರ್​ಪಿ ಎಡಿಜಿಪಿ, ಅಲೋಕ್ ಕುಮಾರ್ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಾಗೂ ನಗರ ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಂ.ಎನ್. ಅನುಚೇತ್ ಸಿಐಡಿ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ಇದನ್ನೂ ಓದಿ:37 ಇನ್ಸ್​ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Last Updated : May 16, 2022, 7:20 PM IST

ABOUT THE AUTHOR

...view details