ಕರ್ನಾಟಕ

karnataka

By

Published : Jul 12, 2020, 2:46 PM IST

ETV Bharat / state

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ ; ರಸ್ತೆ ಮೇಲೆ ಪಿಪಿಇ ಕಿಟ್‌ಗಳು

ಕೊರೊನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸುರಕ್ಷತೆ ಕಾಪಾಡಬೇಕಾದ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿತನ ತೋರಿ ಬೇಕಾಬಿಟ್ಟಿಯಾಗಿ ಬಳಕೆಯಾದ ಪಿಪಿಕಿಟ್‌ಗಳನ್ನು ಎಸೆದಿರುವುದು ಸ್ಥಳೀಯರ ಆಕ್ರೋಶ..

PPPE Kit
ರಸ್ತೆ ಮೇಲೆ ಪಿಪಿಇ ಕಿಟ್​​ ಎಸೆದು ವಿಕೃತಿ

ಬೆಂಗಳೂರು :ಇಲ್ಲಿನನಾಗವಾರ ಸರ್ಕಲ್ ಬಳಿಯ ರಸ್ತೆ ಬದಿ ಬಳಸಿರುವ ಪಿಪಿಇ ಕಿಟ್​ಗಳನ್ನು ಎಸೆಯಲಾಗಿದೆ.

ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ರಾಜಧಾನಿಯಲ್ಲಿ ಪ್ರತಿದಿನ ಈ ರೀತಿ ಪ್ರಕರಣ ಬೆಳಕಿಗೆ ಬರುತ್ತಿವೆ. ಮೊನ್ನೆಯಷ್ಟೇ ಕೆಆರ್‌ಪುರಂನ ಓಲ್ಡ್ ಮದ್ರಾಸ್‌ ರೋಡ್​​ನಲ್ಲಿ ಬಳಸಿದ್ದ ಪಿಪಿಇ ಕಿಟ್​ಗಳು ಪತ್ತೆಯಾಗಿದ್ದವು. ಇದೀಗ ಟಿನ್ ಫ್ಯಾಕ್ಟರಿ ಹಾಗೂ ನಾಗವಾರ ಬಳಿ ಕಿಟ್​​ಗಳು ಕಂಡು ಬಂದಿವೆ.

ರಸ್ತೆ ಮೇಲೆ ಪಿಪಿಇ ಕಿಟ್​​ ಎಸೆದು ವಿಕೃತಿ

ಕೊರೊನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸುರಕ್ಷತೆ ಕಾಪಾಡಬೇಕಾದ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿತನ ತೋರಿ ಬೇಕಾಬಿಟ್ಟಿಯಾಗಿ ಬಳಕೆಯಾದ ಪಿಪಿಕಿಟ್‌ಗಳನ್ನು ಎಸೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details