ಕರ್ನಾಟಕ

karnataka

ETV Bharat / state

ವಿಧಾನಸೌಧದಲ್ಲಿ ಹೈಡ್ರಾಮ ಪ್ರಕರಣ.. ಶಕ್ತಿಸೌಧ, ರಾಜಭವನದ ಸುತ್ತ ಖಾಕಿ ಕಣ್ಗಾವಲು - KN_BNG_02_SECURITY_7204498

ನಿನ್ನೆ ವಿಧಾನಸೌಧದಲ್ಲಿ ಹೈಡ್ರಾಮ ನಡೆದ ಹಿನ್ನೆಲೆಯಲ್ಲಿ ಭದ್ರತಾ ಲೋಪವಾಗದಂತೆ ವಿಧಾನಸೌಧ , ರಾಜಭವನದ ಸುತ್ತ ಖಾಕಿ ಕಣ್ಗಾವಲು ಇಡಲಾಗಿದ್ದು, ವಿಧಾನಸೌಧದ ಸುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ.

ವಿಧಾನಸೌಧದಲ್ಲಿ ಹೈಡ್ರಾಮ ನಡೆದ ಹಿನ್ನಲೆ .. ವಿಧಾನ ಸೌಧ,ರಾಜಭವನ ಸುತ್ತಾ ಖಾಕಿ ಕಣ್ಗಾವಲು

By

Published : Jul 11, 2019, 12:08 PM IST


ಬೆಂಗಳೂರು: ನಿನ್ನೆ ವಿಧಾನಸೌಧದಲ್ಲಿ ಹೈಡ್ರಾಮಾ ನಡೆದ ಹಿನ್ನೆಲೆಯಲ್ಲಿ, ಭದ್ರತಾ ಲೋಪವಾಗದಂತೆ ವಿಧಾನಸೌಧ ,ರಾಜಭವನ ಸುತ್ತ ಖಾಕಿ ಕಣ್ಗಾವಲು ಇಡಲಾಗಿದ್ದು, ವಿಧಾನಸೌಧ ಸುತ್ತಾ‌ ಸೆಕ್ಷನ್ 144 ಜಾರಿ ಮಾಡಲಾಗಿದೆ.

ವಿಧಾನಸೌಧದಲ್ಲಿ ಹೈಡ್ರಾಮ ನಡೆದ ಹಿನ್ನಲೆ .. ವಿಧಾನ ಸೌಧ,ರಾಜಭವನ ಸುತ್ತಾ ಖಾಕಿ ಕಣ್ಗಾವಲು

ಕೆಎಸ್​ಆರ್​ಪಿ ತುಕಡಿ, ಹೊಯ್ಸಳ , ಹೆಚ್ಚುವರಿ ಪೊಲೀಸ್ ಆಯುಕ್ತ, ಡಿಸಿಪಿ, ಇನ್ಸ್​ಪೆಕ್ಟರ್, ಕಾನ್​ಸ್ಟೇಬಲ್, ಹೋಮ್ ಗಾರ್ಡ್ಸ್, ಟ್ರಾಫಿಕ್ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ವಿಧಾನಸೌಧದ ಸುತ್ತಮುತ್ತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿನ್ನೆ ಶಾಸಕ ಸುಧಾಕರ್ ರಾಜೀನಾಮೆ ನೀಡುವ ಸಮಯದಲ್ಲಿ ವಿಧಾನಸೌಧದಲ್ಲಿ ಕೋಲಾಹಲ ಸೃಷ್ಠಿಯಾಗಿತ್ತು. ಹೀಗಾಗಿ ಇಂದು ಕೆಲ ಅತೃಪ್ತ ಶಾಸಕರಾದ ಸೌಮ್ಯರೆಡ್ಡಿ, ಅಂಜಲಿ ನಿಂಬಾಳ್ಕರ್, ಆನಂದ್ ನ್ಯಾಮೇಗೌಡ, ಶಿವಣ್ಣ, ಗಣೇಶ್ ಹುಕ್ಕೇರಿ ಹಾಗೂ ಮಹಾಂತೇಶ್ ಕೌಜಲಗಿ ರಾಜೀನಾಮೆ ಕೊಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಹೀಗಾಗಿ ವಿಧಾನಸೌಧ, ರಾಜಭವನ ಬಳಿ ಬಂದ ನಗರ ಪೊಲೀಸ್​ ಆಯುಕ್ತ ಅಲೋಕ್ ಕುಮಾರ್ ಭದ್ರತೆ ವಹಿಸಿ, ಎಚ್ಚರಿಕೆಯಿಂದ ಇರುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

For All Latest Updates

ABOUT THE AUTHOR

...view details