ಕರ್ನಾಟಕ

karnataka

ಆರ್.ಆರ್.ನಗರ ಉಪ ಚುನಾವಣೆ: ಕ್ಷೇತ್ರದ ಸುತ್ತ ಸಿಐಎಸ್​ಎಫ್​ ತಂಡ ಗಸ್ತು

ಆರ್.ಆರ್. ‌ನಗರ ಕ್ಷೇತ್ರದ ವ್ಯಾಪ್ತಿಯ ಉತ್ತರ ವಿಭಾಗದಲ್ಲಿ ಸೆಂಟ್ರಲ್ ಱಪಿಡ್ ಆ್ಯಕ್ಷನ್ ಫೋರ್ಸ್ ತಂಡ ಆಗಮಿಸಿದ್ದು,‌ಇಂದಿನಿಂದ ಕ್ಷೇತ್ರದಾದ್ಯಂತ ಸಿಐಎಸ್​ಎಫ್​ ತಂಡ ಗಸ್ತು ತಿರುಗಲಿದೆ.

By

Published : Oct 26, 2020, 1:39 PM IST

Published : Oct 26, 2020, 1:39 PM IST

police protection in the R.R Nagar area
ಸಿಐಎಸ್​ಎಫ್​ ತಂಡ ಗಸ್ತು

ಬೆಂಗಳೂರು: ಆರ್.ಆರ್. ನಗರ ಉಪ ಚುನಾವಣೆ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಇಂದು ಮತ್ತೆ ಹೆಚ್ಚುವರಿಯಾಗಿ ಖಾಕಿ‌ ಕಣ್ಗಾವಲು ಹಾಕಲಾಗಿದೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ ಇಂದು ಸಂಜೆ 3 ಗಂಟೆಯಿಂದ ಉತ್ತರ ವಿಭಾಗದಲ್ಲಿ ರೂಟ್ ಮಾರ್ಚ್ ಮಾಡಲಿದ್ದು, ಸಿಐಎಸ್​ಎಫ್, ಕೆಎಸ್​ಆರ್​ಪಿ, ಸಿಎಆರ್​ ಹಾಗೂ ಪೊಲೀಸ್ ಅಧಿಕಾರಿಗಳು ರೂಟ್ ಮಾರ್ಚ್​ನಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಪಕ್ಷದವರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಮತಯಾಚನೆ ಮಾಡ್ತಿದ್ದಾರೆ.

ಈ‌ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಸದ್ಯ ಕಟ್ಟೆಚ್ಚರವನ್ನು ಆರ್.ಆರ್ ನಗರ ವ್ಯಾಪ್ತಿಯಲ್ಲಿ ವಹಿಸಲಾಗಿದೆ.

ABOUT THE AUTHOR

...view details