ಕರ್ನಾಟಕ

karnataka

ETV Bharat / state

ಪೊಲೀಸರ ಮೇಲೆಯೇ ಗುಂಡು ಹಾರಿಸಲು ಮುಂದಾದ ಆರೋಪಿಗಳ ಮೇಲೆ ಫೈರಿಂಗ್ - ಬೆಂಗಳೂರು ಲೇಟೆಸ್ಟ್​ ಫೈರಿಂಗ್​

ಆತ್ಮರಕ್ಷಣೆಗಾಗಿ ಎಎಸ್​ಐ ದಿನೇಶ್ ನೇತೃತ್ವದ ತಂಡ ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಮೆಹೆರಾಜ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಘಟನೆ ಸಂಬಂಧ ಡಿಸಿಪಿ ಶರಣಪ್ಪ ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ..

police open firing on accuse in bengaluru
ಮೆಹರಾಜ್

By

Published : Jan 18, 2021, 5:37 PM IST

Updated : Jan 18, 2021, 8:04 PM IST

ಬೆಂಗಳೂರು :ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ ಆರೋಪಿಗಳ ಪೈಕಿ ಒಬ್ಬ ಆರೋಪಿಯ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಫೈರಿಂಗ್ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಡಿಜಿಪಿ ಶರಣಪ್ಪ ಮಾಹಿತಿ

ಕೆಜಿ ಹಳ್ಳಿಯ ನಿವಾಸಿ ಮೆಹೆರಜ್ ಹಾಗೂ ಅಬ್ರಹಾಂ ಬಂಧಿತ ಆರೋಪಿಗಳು. ಈ ಪೈಕಿ ಗುಂಡು ತಿಂದ ಮೆಹೆರಾಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಜಿ ಹಳ್ಳಿಯ ಠಾಣೆಯ ಸುಲ್ತಾನ್ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಒಂದು ವರ್ಷಗಳಿಂದ ಇಬ್ಬರೂ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಬಾಣಸವಾಡಿ ಎಸಿಪಿ ನೇತೃತ್ವದಲ್ಲಿ ವಿಶೇಷ ಪೊಲೀಸ್​ ತಂಡ ರಚಿಸಲಾಗಿತ್ತು. ನಾಲ್ಕು ದಿನಗಳ ಹಿಂದೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಬಾಡಿಗೆ ಮನೆ ಪಡೆದು ವಾಸ ಮಾಡಿಕೊಂಡಿದ್ದರು ಎಂಬ ಮಾಹಿತಿ ಆಧಾರದ ಮೇಲೆ ಬಂಧಿಸಲು ಹೋದ ಎಎಸ್​ಐ ದಿನೇಶ್ ಶೆಟ್ಟಿಗೆ ಆರೋಪಿಯಾದ ಅಬ್ರಾಹಂ ಡ್ರ್ಯಾಗರ್​ನಿಂದ ಚುಚ್ಚಿದ್ದಾನೆ, ಮೆಹರಾಜ್ ತನ್ನ ಬಳಿಯಿದ್ದ ಪಿಸ್ತೂಲ್​ನಿಂದ ಶೂಟ್ ಮಾಡಿದ್ದಾನೆ‌‌‌. ಆತ್ಮರಕ್ಷಣೆಗಾಗಿ ಎಎಸ್​ಐ ದಿನೇಶ್ ನೇತೃತ್ವದ ತಂಡ ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಕ್ಷಣಾರ್ಧದಲ್ಲಿ ಗುಂಡೇಟಿನಿಂದ ಎಎಸ್ಐ ತಪ್ಪಿಸಿಕೊಂಡಿದ್ದಾರೆ.

ಮೆಹರಾಜ್

ಬಂಧಿತ ಮೆಹರಾಜ್ ವಿರುದ್ಧ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿವೆ. ಈ ಹಿಂದೆ ನಂದಿನಿ ಲೇಔಟ್ ಹಾಗೂ ಕೋಲಾರದಲ್ಲಿ ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಘಟನೆ ಸಂಬಂಧ ಡಿಸಿಪಿ ಶರಣಪ್ಪ ಸ್ಥಳ ಭೇಟಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :ವೆಬ್​ ಸಿರೀಸ್ ಮಿರ್ಜಾಪುರ್, ಅಮೆಜಾನ್ ಪ್ರೈಮ್ ವಿರುದ್ಧ ಮಿರ್ಜಾಪುರದಲ್ಲಿ ಎಫ್​ಐಆರ್!

Last Updated : Jan 18, 2021, 8:04 PM IST

ABOUT THE AUTHOR

...view details