ಕರ್ನಾಟಕ

karnataka

ETV Bharat / state

ನೆರೆ ಪರಿಹಾರಕ್ಕೆ ಕೈ ಜೋಡಿಸಿದ  ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ! - ನೆರೆ ಸಂತ್ರಸ್ತರಿಗೆ ಪರಿಹಾರ

ಉತ್ತರ ಕರ್ನಾಟಕದಲ್ಲಿನ ಭೀಕರ ನೆರೆಯಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಂತ್ರಸ್ತರ ಕಷ್ಟಕ್ಕೆ ಮನ ಮಿಡಿದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವೈಯಕ್ತಿಕವಾಗಿ ಪರಿಹಾರ ನೀಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

By

Published : Aug 14, 2019, 4:07 PM IST

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಭೀಕರ ನೆರೆಯಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬದುಕು ಮೂರಾಬಟ್ಟೆಯಾಗಿದೆ.‌ ಸಂತ್ರಸ್ತರ ನೆರವಿಗೆ ರಾಜ್ಯದೆಲ್ಲೆಡೆ ದಾನಿಗಳು ತಮ್ಮ ಕೈಲಾದಷ್ಟು ಪರಿಹಾರ ನೀಡಿದ್ದಾರೆ. ಸಂತ್ರಸ್ಥರ ಕಷ್ಟಕ್ಕೆ ಮನ ಮಿಡಿದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವೈಯಕ್ತಿಕವಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನು ಭೇಟಿ ಮಾಡಿ ಪರಿಹಾರ ಪತ್ರ ನೀಡಿದ ಭಾಸ್ಕರ್ ರಾವ್

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನು ಭೇಟಿ ಮಾಡಿ ಪರಿಹಾರ ಪತ್ರ ನೀಡಿದ್ದಾರೆ. ‌ ಈ ಬಗ್ಗೆ ಈಟಿವಿ ಭಾರತ್ ದೊಂದಿಗೆ ಮಾತನಾಡಿದ ಆಯುಕ್ತ ಭಾಸ್ಕರ್ ರಾವ್ ‌ನೆರಯಿಂದ ಉತ್ತರ ಕರ್ನಾಟಕ ಜನರು ಸಂತ್ರಸ್ತರಾಗಿದ್ದು, ಅವರ ಕಷ್ಟಕ್ಕೆ ಸ್ಪಂದಿಸುವುದು‌ ನಮ್ಮೆಲ್ಲರ ಕರ್ತವ್ಯ.

ಈ ದಿಸೆಯಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನಾನು ಯಾರಿಗೂ ಪರಿಹಾರ ನೀಡುವಂತೆ ಹೇಳುವುದಿಲ್ಲ. ಪೊಲೀಸರಿಗೆ ಇಷ್ಟವಿದ್ದರೆ ಅವರು ಸಹಾಯ ಮಾಡುತ್ತಾರೆ ಎಂದಿದ್ದಾರೆ.

ABOUT THE AUTHOR

...view details