ಕರ್ನಾಟಕ

karnataka

ETV Bharat / state

ಕನ್ನಡವೇ ಧನಧಾನ್ಯ, ಕನ್ನಡವೇ ಮನೆಮಾನ್ಯ.. ಬೆಂಗಳೂರು ಪೊಲೀಸರಿಂದ ರಾಜ್ಯೋತ್ಸವದ ಶುಭಾಶಯ

ಕನ್ನಡ ಕಲಿತು ಬಾಳೋದು ಹಿರಿಮೆ.. ಕನ್ನಡಿಗರೊಂದಿಗೆ ಬೆರೆತು ಬಾಳೋದು ಗರಿಮೆ ಎಂದು ಕನ್ನಡಿಗರಿಗೆ ಶುಭಾಶಯ ಕೋರಿದ್ದಾರೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್ ಪಂಥ್..

By

Published : Nov 1, 2020, 11:47 AM IST

police commisioner kamal panth wishes for kannada rajyostava
65ನೇ ಕನ್ನಡ ರಾಜ್ಯೋತ್ಸವ

ಬೆಂಗಳೂರು :65ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಇಂದು ಎಲ್ಲೆಡೆ ಕನ್ನಡದ ಕಂಪು ಹರಿದಾಡಿದೆ. ಬೆಂಗಳೂರು ಜನರನ್ನ ಕಾಯುವ ಹೊಣೆಹೊತ್ತ ಪೊಲೀಸ್ ಇಲಾಖೆ ಸಹ ರಾಜ್ಯೋತ್ಸವದ ಸಂಭ್ರಮದಲ್ಲಿ ಕನ್ನಡಿಗರಿಗೆಲ್ಲರಿಗೂ ಶುಭಾಶಯ ತಿಳಿಸಿದೆ.

65ನೇ ಕನ್ನಡ ರಾಜ್ಯೋತ್ಸವ
ಬಹಳಷ್ಟು ಮಂದಿ ಬೇರೆ -ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ನೆಲೆಯೂರಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಕೂಡ ಒಬ್ಬರು. ಸದ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕನ್ನಡವೇ ಧನಧಾನ್ಯ, ಕನ್ನಡವೇ ಮನೆಮಾನ್ಯ, ನುಡಿಯಿಂದ ನಾಡು ಎಂಬ ಸಂಕಲ್ಪದಿಂದ ಉದಯಿಸಿದ ಚಂದದ ನಾಡಿನ ಸ್ವಚ್ಛ ಮನಸ್ಸಿನ ಸಮಸ್ತ ಜನತೆಗೆ 65ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.. ಕನ್ನಡ ಕಲಿತು ಬಾಳೋದು ಹಿರಿಮೆ.. ಕನ್ನಡಿಗರೊಂದಿಗೆ ಬೆರೆತು ಬಾಳೋದು ಗರಿಮೆ ಎಂದು ಕನ್ನಡಿಗರಿಗೆ ಶುಭಾಶಯ ಕೋರಿದ್ದಾರೆ.
65ನೇ ಕನ್ನಡ ರಾಜ್ಯೋತ್ಸವ
ನಗರ ಆಯುಕ್ತರ ಟ್ವೀಟ್ ಹಾಗೂ ಬೆಂಗಳೂರು ಪೊಲೀಸರ ಟ್ವೀಟ್​​ಗೆ ಬಹಳ ಜನ ಪ್ರತಿಕ್ರಿಯಿಸಿ ಕನ್ನಡ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ABOUT THE AUTHOR

...view details