ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ: ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಹಿಂದೇಟು ಆರೋಪ - ನೊಂದ ಮಹಿಳೆಯಿಂದ ದೂರು ಪಡೆಯಲು ನಿರಾಕರಿಸಿದ ಪೊಲೀಸರು

ನಿನ್ನೆ ಹೆಬ್ಬಾಳ ಬಳಿಯಿರುವ ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ಇಬ್ಬರು ನಿವಾಸಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಹಲ್ಲೆ ನಡೆದಿತ್ತು. ಈ ಸಂಬಂಧ ನೊಂದ ಮಹಿಳೆ ದೂರು ದಾಖಲಿಸಲು ಪೊಲೀಸ್​ ಠಾಣೆಗೆ ತೆರಳಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಮಹಿಳೆ ಫೇಸ್​ಬುಕ್​​ ಲೈವ್​ನಲ್ಲಿ ಬಂದು ಆರೋಪ ಮಾಡಿದ್ದಾಳೆ.

ಫೇಸ್​​ಬುಕ್​ ಲೈವ್​​ನಲ್ಲಿ ಅಳಲು ತೋಡಿಕೊಂಡ ಮಹಿಳೆ
Woman came facebook live and sharing her misery

By

Published : Feb 10, 2021, 7:55 AM IST

ಬೆಂಗಳೂರು:ಹೆಬ್ಬಾಳ ಬಳಿಯಿರುವ ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ನಡೆದ ಘಟನೆ ಸಂಬಂಧ ದೂರು ನೀಡಲು ಹೋದ ಮಹಿಳೆಯಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ನೊಂದ ಮಹಿಳೆ ಫೇಸ್​ಬುಕ್​ ಲೈವ್​ ಬಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಫೇಸ್​​ಬುಕ್​ ಲೈವ್​​ನಲ್ಲಿ ಅಳಲು ತೋಡಿಕೊಂಡ ಮಹಿಳೆ

ಹೆಬ್ಬಾಳ ಬಳಿಯಿರುವ ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಜಾನ್ಸನ್​ ಮತ್ತು ಚಂಚಲ್ ಎಂಬುವರ ನಡುವೆ ರಾದ್ಧಾಂತವಾಗಿತ್ತು. ಅಕ್ಕ-ಪಕ್ಕದಲ್ಲೇ ಫ್ಲ್ಯಾಟ್ ಹೊಂದಿದ್ದ ಚಂಚಲ್ ಹಾಗೂ ಜಾನ್ಸನ್, ನೀವು ಈ ಜಾಗಕ್ಕೆ ಬರಬೇಡಿ, ಇದು ನಮ್ಮ ಜಾಗ ಎಂದು ದಿನೇ ದಿನೇ ಕಿರಿಕ್ ಮಾಡುತ್ತಿದ್ದನಂತೆ. ಅಷ್ಟೇ ಅಲ್ಲದೆ, ಅಪಾರ್ಟ್​ಮೆಂಟ್ ಆಡಳಿತ ಮಂಡಳಿ ಅನುಮತಿ ಪಡೆದು ಫ್ಲ್ಯಾಟ್​ಗಳಿಗೆ ಚಂಚಲ್​​ ಬ್ಯುಸಿನೆಸ್​ ಪಾಂಪ್ಲೆಟ್ಸ್ ಹಾಕಲಾಗಿದ್ದು, ಇದೇ ವಿಚಾರವಾಗಿ ಜಾನ್ಸನ್ ಮತ್ತೆ ಕಿರಿಕ್ ತೆಗೆದು, ಮನೆಗೆ ನುಗ್ಗಿ ಮೊಬೈಲ್‌ ಕಿತ್ತುಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.

ಓದಿ: ಕ್ಷುಲ್ಲಕ ಕಾರಣಕ್ಕೆ ಕಿರಿಕ್.. ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದವನ ವಿರುದ್ಧ ದೂರು..

ಈ ಸಂಬಂಧ ನೊಂದ ಮಹಿಳೆ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದಾಳೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೆ ಮುಂದೆ ನೋಡಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಚಂಚಲ್​ ಫೇಸ್​ಬುಕ್​ ಲೈವ್​ ಬಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು, ಎನ್​ಸಿಆರ್ ದಾಖಲು ಮಾಡಿಕೊಂಡಿದ್ದು, ಜಾನ್ಸನ್​ಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details