ಕರ್ನಾಟಕ

karnataka

ETV Bharat / state

ವಿಶ್ವ ಪರಿಸರ ದಿನ: ಅಣ್ಣಾಮಲೈ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ

ವಿಶ್ವ ಪರಿಸರ ದಿನದ ಅಂಗವಾಗಿ ಖಡಕ್​ ಪೊಲೀಸ್​ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಜಯನಗರ ಪೊಲೀಸ್ ವಸತಿ ಗೃಹದ ಸುತ್ತ ಗಿಡ ನೆಟ್ಟು ಪರಿಸರ ದಿನ ಆಚರಣೆ.

By

Published : Jun 5, 2019, 9:19 PM IST

ಅಣ್ಣಾಮಲೈ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ

ಬೆಂಗಳೂರು :ವಿಶ್ವ ಪರಿಸರ ದಿನದ ಅಂಗವಾಗಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಎಸಿಪಿ ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳು ಜಯನಗರ ಪೊಲೀಸ್ ವಸತಿ ಗೃಹದ ಸುತ್ತ ಗಿಡ ನೆಟ್ಟು ಪರಿಸರ ದಿನ ಆಚರಿಸಿದರು.

ಇನ್ನು ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಟ ಶ್ರೀನಾಥ್​ ಹಾಗೂ ಜೆ.ಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಭಾಗಿಯಾಗಿದ್ರು.

ಈ ಬಗ್ಗೆ ಮಾತನಾಡಿದ ಅಣ್ಣಾಮಲೈ, ಪರಿಸರ ದಿನವನ್ನು ಯಾವತ್ತೋ ಒಂದು ದಿನ ಆಚರಿಸಬಾರದು. ಪ್ರತಿದಿನವನ್ನೂ ಪರಿಸರ ದಿನವನ್ನಾಗಿಸಬೇಕು ಎಂದರು.

ABOUT THE AUTHOR

...view details