ಬೆಂಗಳೂರು:ಪಾರಿವಾಳ ಸಾಕುವುದು ಇತ್ತೀಚಿಗಿನ ದಿನಗಳಲ್ಲಿ ಒಂದು ರೀತಿಯ ಕ್ರೇಜ್ ಆಗಿದೆ. ಇದೇ ಕ್ರೇಜ್ ಇಬ್ಬರು ಬಾಲಕರ ಜೀವಕ್ಕೆ ಕುತ್ತು ತಂದಿದೆ. ಪಾರಿವಾಳ ಹಿಡಿಯಲು ಹೋಗಿದ್ದ ಬಾಲಕರಿಗೆ ಹೈ ಟೆನ್ಷನ್ ವೈರ್ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಶನ್ ವೈರ್ ಸ್ಪರ್ಶ; ಇಬ್ಬರು ಬಾಲಕರು ಗಂಭೀರ - ETv Bharat Kannada news
ಬೆಂಗಳೂರಿನಲ್ಲಿ ಪಾರಿವಾಳ ಹಿಡಿಯಲು ಹೋಗಿದ್ದ ಬಾಲಕರಿಗೆ ಹೈ ಟೆನ್ಷನ್ ವೈರ್ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
![ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಶನ್ ವೈರ್ ಸ್ಪರ್ಶ; ಇಬ್ಬರು ಬಾಲಕರು ಗಂಭೀರ Pigeon that brought the life of the boys](https://etvbharatimages.akamaized.net/etvbharat/prod-images/768-512-17088787-thumbnail-3x2-mh.jpg)
ಬಾಲಕರ ಜೀವಕ್ಕೆ ಕುತ್ತು ತಂದ ಪರಿವಾಳ
ನಂದಿನಿ ಲೇಔಟ್ನ ವಿಜಯನಂದ ನಗರದಲ್ಲಿ ಗುರುವಾರ ಮಧ್ಯಾಹ್ನ 11 ವರ್ಷದ ಬಾಲಕರಿಬ್ಬರು ಮನೆಯ ಮೇಲೆ ಏರಿ ಪಾರಿವಾಳ ಹಿಡಿಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಕಬ್ಬಿಣದ ರಾಡ್ನಿಂದ ಹಕ್ಕಿಯನ್ನು ಹಾರಿಸುವಾಗ ಹೈ ಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಬಾಲಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂಓದಿ:ಪಾರಿವಾಳ ಹಿಡಿಯಲು ಹೋಗಿ 4ನೇ ಮಹಡಿಯಿಂದ ಆಯತಪ್ಪಿ ಬಿದ್ದು ಯುವಕ ಸಾವು