ಕರ್ನಾಟಕ

karnataka

ETV Bharat / state

ಕೊರೊನಾ ಬಗ್ಗೆ ರಾಜ್ಯದ ಜನಕ್ಕೆ ಆತಂಕ ಬೇಡ: ಬಿಎಸ್​ವೈ

ಕೊರೊನಾ ವಿಚಾರದಲ್ಲಿ ರಾಜ್ಯದ ಜನತೆ ಆತಂಕ ಪಡುವುದು ಬೇಡ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಅಭಯ ನೀಡಿದ್ದಾರೆ.

By

Published : Mar 4, 2020, 12:15 PM IST

Updated : Mar 4, 2020, 12:22 PM IST

people need not worry about Corona
ಕೊರೊನಾ ಬಗ್ಗೆ ರಾಜ್ಯದ ಜನಕ್ಕೆ ಆತಂಕ ಬೇಡ: ಬಿಎಸ್​ವೈ

ಬೆಂಗಳೂರು: ಕೊರೊನಾ ವೈರಸ್​ ವಿಚಾರದಲ್ಲಿ ರಾಜ್ಯದ ಜನತೆ ಆತಂಕ ಪಡುವುದು ಬೇಡ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಅಭಯ ನೀಡಿದ್ದಾರೆ.

ಕೊರೊನಾ ಬಗ್ಗೆ ರಾಜ್ಯದ ಜನಕ್ಕೆ ಆತಂಕ ಬೇಡ: ಬಿಎಸ್​ವೈ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಏರ್‌ಪೋರ್ಟ್‌ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಸೋಂಕಿತರು ಇಲ್ಲ. ಈ ವಿಚಾರದಲ್ಲಿ ಆರೋಗ್ಯ ಸಚಿವರು ಈಗಾಗಲೆ ಮಾತನಾಡಿದ್ದಾರೆ ಎಂದು ತಿಳಿಸಿದರು. ಎಲ್ಲಾ ರೀತಿಯ ಮುಂಜಾಗೃತ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ. ಮಾಧ್ಯಮದಲ್ಲಿ ಬರುತ್ತಿರುವುದು ಸತ್ಯಕ್ಕೆ ದೂರವಾದುದು. ರಾಜ್ಯದ ಜನತೆ ಆತಂಕ ಪಡೋದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದೇ ವದಂತಿಗಳಿಗೆ ಜನ ತಲೆ‌ಕಡೆಸಿಕೊಳ್ಳುವುದು ಬೇಡ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ರಾಜ್ಯದಲ್ಲಿ ಕೂಡ ಸೂಕ್ತ ತಯಾರಿ ನಡೆಸಲಾಗಿದೆ. ಏರ್​ಪೋರ್ಟ್ ಗಳಲ್ಲಿ ವಿದೇಶಿದಿಂದ ಬಂದವರಿಗೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ ಎಂದರು.

Last Updated : Mar 4, 2020, 12:22 PM IST

ABOUT THE AUTHOR

...view details