ಕರ್ನಾಟಕ

karnataka

ETV Bharat / state

ಅನುದಾನಿತ ಶಾಲಾ-ಕಾಲೇಜುಗಳ ಅಧ್ಯಾಪಕರಿಗೆ ಶಿಕ್ಷಣ ಸಚಿವರಿಂದ  ಪಿಂಚಣಿ ಭರವಸೆ! - Protest by faculty

ಟೌನ್‌ಹಾಲ್ ಎದುರು ಬೃಹತ್ ಹೋರಾಟ ನಡೆಸುತ್ತಿದ್ದ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಅಧ್ಯಾಪಕರುಗಳ ಮನವಿಯನ್ನು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಬಂದು ಸ್ವೀಕರಿಸಿದ್ದಾರೆ.

pension-for-the-faculty-of-aided-school-colleges
pension-for-the-faculty-of-aided-school-colleges

By

Published : Jan 11, 2020, 8:12 AM IST

ಬೆಂಗಳೂರು: ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಅಧ್ಯಾಪಕರು ತಮಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಟೌನ್‌ಹಾಲ್ ಎದುರು ಬೃಹತ್ ಹೋರಾಟ ನಡೆಸಿದ್ದಾರೆ.

ಸರ್ಕಾರ ಈಗಾಗಲೇ ಸರ್ಕಾರಿ ಶಾಲೆಯ ಬೋಧಕರಿಗೆ ನೀಡುತ್ತಿರುವ ಸವಲತ್ತುಗಳ ಯೋಜನೆಯನ್ನು ನಮಗೂ ವಿಸ್ತರಿಸಬೇಕು ಹಾಗೂ ನಿವೃತ್ತಿ ಬಳಿಕ ಅನುದಾನಿತ ನೌಕರರಿಗೆ ಜೀವನ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ನಮಗೆ ಪಿಂಚಣಿ ಸೌಲಭ್ಯ ಒದಗಿಸಿ ಕೊಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಟೌನ್‌ಹಾಲ್ ಎದುರು ಬೃಹತ್ ಹೋರಾಟ

ಇನ್ನು ಪ್ರತಿಭಟನೆ ಮುಂದುವರಿಯುವ ಸೂಚನೆ ಸಿಕ್ಕಿದ ನಂತರ ಸ್ಥಳಕ್ಕೆ ಆಗಮಿಸಿದ ಸಚಿವ ಸುರೇಶ್ ಕುಮಾರ್ ಎದುರು, ಎಂಎಲ್​​ಸಿ ಪುಟ್ಟಣ್ಣಯ್ಯ ಮಾತನಾಡಿ, ನಾವು ಚಿಕ್ಕವರಿಂದಲೂ ನಿಮ್ಮ ಆದರ್ಶ ಬದುಕನ್ನ ನೋಡಿ ಬೆಳೆದಿದ್ದೇವೆ. ಹಾಗೇ ನಮ್ಮ ಬೇಡಿಕೆಗಳನ್ನು ತಮ್ಮ ಅವಧಿಯಲ್ಲಿ ಪೂರೈಸುತ್ತೀರಿ ಎಂಬ ನೀರಿಕ್ಷೆಯನ್ನು ತಮ್ಮ ಮೇಲೆ ಇಟ್ಟುಕೊಂಡಿದ್ದೇವೆ ಎಂದರು.

ನಂತರ ಅಧ್ಯಾಪಕರನ್ನು ಕುರಿತು ಮಾತನಾಡಿದ ಶಿಕ್ಷಣ ಸಚಿವರು, ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ ಶಿಕ್ಷಕನಿಗೆ ತರಾಟೆಗೆ ತೆಗೆದುಕೊಂಡರು. ಆತ್ಮಹತ್ಯೆ ಎಂಬ ಪದ ಯಾರ ಬಾಯಲ್ಲೂ ಬರಬಾರದು, ನಿಮ್ಮ ಪಿಂಚಣಿ ಮತ್ತು ಆರೋಗ್ಯ ವಿಮೆಯ ಬಗ್ಗೆ ಈಗಾಗಲೇ ಚರ್ಚೆಗಳು ನಡೆದಿವೆ. ಈ ಬಗ್ಗೆ ಅಧಿಕೃತವಾಗಿ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಡುತ್ತೇನೆ, ನೀವು ಹೇಳುತ್ತಿರುವುದರಲ್ಲಿ ನ್ಯಾಯವಿದೆ ಎಂದರು.

ABOUT THE AUTHOR

...view details