ಕರ್ನಾಟಕ

karnataka

ETV Bharat / state

ಏರ್​ಪೋರ್ಟ್​ನಲ್ಲಿ ದಾಖಲೆ ಕೇಳಿದ್ದಕ್ಕೆ ಕರ್ತವ್ಯನಿರತ ಮಹಿಳಾ ಇನ್​ಸ್ಪೆಕ್ಟರ್ ಮೇಲೆ ಪ್ರಯಾಣಿಕನಿಂದ ಹಲ್ಲೆ - ETV Bharath Kannada news

ದಾಖಲೆಗಳನ್ನು ಕೇಳಿದ್ದಕ್ಕೆ ಗರಂ- ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ

passenger assaulted a female inspector on duty  in Bangalore
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

By

Published : Jan 1, 2023, 11:00 PM IST

ದೇವನಹಳ್ಳಿ(ಬೆಂಗಳೂರು): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವ ಸಮಯದಲ್ಲಿ ಓರ್ವ ಸಿಐಎಸ್​ಎಫ್ ಮಹಿಳಾ ಇನ್​ಸ್ಪೆಕ್ಟರ್​ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ. ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದ ನಶೆಯಲ್ಲಿದ್ದ ಪ್ರಯಾಣಿಕ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೆಐಎಎಲ್​ನಲ್ಲಿ ಡಿಸೆಂಬರ್ 25ರ ಸಂಜೆ 5:10 ಸಮಯದಲ್ಲಿ ಘಟನೆ ನಡೆದಿದೆ. ಜಾಕಿ ಅಮ್ಮನೂರ್ ಖಾಸಿಮ್ ಎಂಬ ವ್ಯಕ್ತಿ ಬೆಂಗಳೂರಿನಿಂದ ಕೊಚ್ಚಿನ್​ಗೆ ಪ್ರಯಾಣ ಬೆಳಸಿದ್ದರು. ಸೆಕ್ಯೂರಿಟಿ ಚೆಕ್​ನಲ್ಲಿ ಸಿಐಎಸ್​ಎಫ್ ಮಹಿಳಾ ಇನ್​ಸ್ಪೆಕ್ಟರ್ ಧನೇಶ್ವರಿ ಕುಟ್ಟಾಮ್ ಕರ್ತವ್ಯದಲ್ಲಿದ್ದರು.

ಜಾಕಿ ಅಮ್ಮನೂರ್ ಖಾಸಿಮ್ ಗ್ರೀನ್ ಕಾರ್ಡ್ ಕಳೆದಿರುವ ಬಗ್ಗೆ ಮಹಿಳಾ ಇನ್​ಸ್ಪೆಕ್ಟರ್ ಅವರಿಗೆ ತಿಳಿಸಿದ್ದಾರೆ. ಲಾಸ್ಟ್ ಆಂಡ್ ಫೌಂಡ್ ದೂರು ನೀಡುವಂತೆ ಹೇಳಿದ ಅಧಿಕಾರಿ ಫಾರಂ ಸಹ ನೀಡಿದ್ದರು. ಈ ಸಮಯದಲ್ಲಿ ದಾಖಲೆಗಳನ್ನು ಮಹಿಳಾ ಅಧಿಕಾರಿಯ ಮೇಲೆ ಎಸೆದು ಕಿರಿಚಾಡಿದ್ದಾರೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೆ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಸಹ ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಕೆಲಸಕ್ಕೆ ಅಡ್ಡಿಪಡಿಸಿದ್ದು, ನಿಂದನೆ ಮತ್ತು ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ಹೊಸ ವರ್ಷಾಚರಣೆ ವೇಳೆ ಫೋಟೋ ಗಲಾಟೆ : ಯುವಕ ಯುವತಿಯರ ಮೇಲೆ ಪುಂಡರಿಂದ ಹಲ್ಲೆ

ABOUT THE AUTHOR

...view details