ಕರ್ನಾಟಕ

karnataka

ETV Bharat / state

ಪರಮ್​​ ಪಿಎ ಆತ್ಮಹತ್ಯೆ ಪ್ರಕರಣ: ಪೊಲೀಸರ ತನಿಖೆಗೆ ಕ್ಯಾರೆ ಎನ್ನದ ಐಟಿ ಅಧಿಕಾರಿಗಳು - Parameshwar PA suicide news

ಪರಮೇಶ್ವರ್​ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ತನಿಖೆ ನಡೆಸುತ್ತಿದ್ದು,  ಪ್ರಕರಣ ಸಂಬಂಧ ಐಟಿ ಇಲಾಖೆ ಪೊಲೀಸರ ತನಿಖೆಗೆ ಸರಿಯಾದ ರೀತಿ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ತಿಳಿದು‌ಬಂದಿದೆ.

ಪರಮ್​​ ಪಿಎ ಆತ್ಮಹತ್ಯೆ ಪ್ರಕರಣ: ಪೊಲೀಸರ ತನಿಖೆಗೆ ಕ್ಯಾರೆ ಎನ್ನದ ಐಟಿ

By

Published : Oct 28, 2019, 11:53 AM IST

ಬೆಂಗಳೂರು: ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್​ ಅವರ ಪಿ.ಎ. ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಾಜಿ ಡಿಸಿಎಂ ಮನೆಗೆ ಮೇಲೆ ಐಟಿ ಇಲಾಖೆ ದಾಳಿ ನಡೆಸಲಾಗಿತ್ತು. ಈ ವೇಳೆ ಪರಂ ಆಪ್ತ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹೀಗಾಗಿ ರಮೇಶ್ ಐಟಿ ವಿಚಾರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್ ಬರೆದಿಟ್ಟು ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಹೀಗಾಗಿ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸರು ಪ್ರಕರಣ ಹಿನ್ನಲೆ ರಮೇಶ್ ಆಪ್ತರು ಮಾಜಿ ಡಿಸಿಎಂ ಪರಮೇಶ್ವರ್ ಕೆಲ‌ ಆಪ್ತರನ್ನ ತನಿಖೆಗೆ ಒಳಪಡಿಸಿದ್ರು. ಹಾಗೆಯೇ ರಮೇಶ್ ಮನೆಗೆ ಐಟಿ ‌ಅಧಿಕಾರಿಗಳು ತೆರಳುವ ದೃಶ್ಯ ವೈರಲ್​ಲಾಗಿತ್ತು. ನಂತರ ಐಟಿ ಇಲಾಖೆಗೆ ಜ್ಞಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿ ರಮೇಶ್ ನಿವಾಸಕ್ಕೆ ಯಾಕೆ ತೆರಳಿದ್ರಿ? ಆ ಸಮಯದಲ್ಲಿ ರಮೇಶ್ ನಿವಾಸದಲ್ಲಿ ನಡೆದಿದ್ದಾದ್ರು ಏನು..? ಇದಕ್ಕೆ ಸಮರ್ಪಕ ಉತ್ತರ ನೀಡಿ ಎಂದು ಕೇಳಿದ್ದರು. ನೋಟಿಸ್ ನೀಡಿ ಹತ್ತು ದಿನ ಕಳೆದ್ರು ಐಟಿ ಉತ್ತರ ನೀಡದೆ ಇರುವುದು ತನಿಖೆಗೆ ಕೊಂಚ ಹಿನ್ನೆಡೆಯಾಗಿದೆ.

ABOUT THE AUTHOR

...view details