ಬೆಂಗಳೂರು:ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜ್ಞಾನ ಭಾರತಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಮೇಶ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಪರಮೇಶ್ವರ್ ಕಾರು ಚಾಲಕನ ವಿಚಾರಣೆ - parameshwar PA suicide case
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ ತನಿಖೆಯು ನಗರದ ಜ್ಞಾನ ಭಾರತಿ ಠಾಣೆ ಇನ್ಸ್ಪೆಕ್ಟರ್ ಶಿವ ರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿದೆ.
![ರಮೇಶ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಪರಮೇಶ್ವರ್ ಕಾರು ಚಾಲಕನ ವಿಚಾರಣೆ](https://etvbharatimages.akamaized.net/etvbharat/prod-images/768-512-4737047-thumbnail-3x2-ramesh.jpg)
ಇನ್ಸ್ಪೆಕ್ಟರ್ ಶಿವರೆಡ್ಡಿ ನೇತೃತ್ವದಲ್ಲಿ ಪರಮೇಶ್ವರ್ ಅವರ ಕಾರು ಚಾಲಕ ಅನಿಲ್ ಎಂಬುವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅನಿಲ್ ಹಾಗೂ ಮೃತ ರಮೇಶ್ ಉತ್ತಮ ಸ್ನೇಹಿತರಾಗಿದ್ದರು. ಹಾಗೆಯೇ ಇಬ್ಬರೂ ಪರಮೇಶ್ವರ್ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅನಿಲ್ ಅವರಿಂದ ರಮೇಶ್ ಕುರಿತು ಮಾಹಿತಿ ಹಾಗೂ ಸ್ನೇಹಿತರು, ಅಪ್ತವಲಯದಲ್ಲಿ ರಮೇಶ್ ಹೇಗಿದ್ದರು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ರಮೇಶ್ ಕೊನೆಯ ಬಾರಿಗೆ ಕರೆ ಮಾಡಿದ್ದವರ ವಿವರಕ್ಕಾಗಿ ಸರ್ವೀಸ್ ಪ್ರೊವೈಡರ್ಗೆ ಜ್ಞಾನ ಭಾರತಿ ಪೊಲೀಸರು ಪತ್ರ ಬರೆದಿದ್ದಾರೆ. ರಮೇಶ್ ಕೊನೆಯ ಬಾರಿಗೆ ಯಾರೊಂದಿಗೆ ಮಾತನಾಡಿದ್ದರು ಎಂಬ ಬಗ್ಗೆ ವಿವರ ನಾಳೆ ಪೊಲೀಸರ ಕೈಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.