ಕರ್ನಾಟಕ

karnataka

ETV Bharat / state

ಶಾಸಕರಿಬ್ಬರ ಪ್ರತಿಷ್ಠೆ: ಇನ್ಸ್​​ಪೆಕ್ಟರ್ ಕುರ್ಚಿಗಾಗಿ ಹಾವು ಏಣಿ ಆಟ - ಒಂದು ಪೋಸ್ಟ್​​ಗೆ ಇಬ್ಬರು ಇನ್ಸ್​​ಪೆಕ್ಟರ್​​ಗಳು ಪೈಪೋಟಿ

ಇಬ್ಬರು ಇನ್ಸ್​​ಪೆಕ್ಟರ್​ಗಳ ಮಧ್ಯೆ ಶಾಸಕರಿಬ್ಬರು ಮಧ್ಯೆ ಪ್ರವೇಶ ‌ಮಾಡಿ ಒಂದು ಪೋಸ್ಟ್​​ಗೆ ಇಬ್ಬರು ಇನ್ಸ್​​ಪೆಕ್ಟರ್​​ಗಳು ಪೈಪೋಟಿ ಶುರು ಮಾಡಿದ್ದಾರೆ‌.

officers  Fight for the  Inspector post
ಒಂದು ಪೋಸ್ಟ್​​ಗೆ ಇಬ್ಬರು ಇನ್ಸ್​​ಪೆಕ್ಟರ್​​ಗಳು ಪೈಪೋಟಿ

By

Published : Aug 26, 2020, 11:30 AM IST

ಬೆಂಗಳೂರು: ಸಮಾಜವನ್ನು ರಕ್ಷಿಸಲು ಕರ್ತವ್ಯದಲ್ಲಿ ನಿರತರಾಗಬೇಕಾದ ಖಾಕಿ ಸದ್ಯ ಕುರ್ಚಿಗಾಗಿ ಹಾವು ಏಣಿ ಆಟ ಆಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಇನ್ಸ್​​ಪೆಕ್ಟರ್ ರಾಘವೆಂದ್ರ

ಹೆಚ್​​ಎಸ್​​ಆರ್ ಠಾಣೆಯಿಂದ ಪರಪ್ಪನ ಅಗ್ರಹಾರ ಠಾಣೆಗೆ ಇನ್ಸ್​​ಪೆಕ್ಟರ್ ರಾಘವೇಂದ್ರ ಅವರನ್ನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಗೃಹ ಇಲಾಖೆ ನಿಯಮದ ಪ್ರಕಾರ ವರ್ಗಾವಣೆ ಮಾಡಿದ್ದರು‌‌. ಆದರೆ, ಅದೇ ಠಾಣೆಯಲ್ಲಿದ್ದ ನಂದೀಶ್ ಅವರನ್ನ ಬೇರೆ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಇಬ್ಬರು ಇನ್ಸ್​​ಪೆಕ್ಟರ್​ಗಳ ಮಧ್ಯೆ ಶಾಸಕರಿಬ್ಬರು ಮಧ್ಯೆ ಪ್ರವೇಶ ‌ಮಾಡಿ ಒಂದು ಪೋಸ್ಟ್​​ಗೆ ಇಬ್ಬರು ಇನ್ಸ್​​ಪೆಕ್ಟರ್​​ಗಳು ಪೈಪೋಟಿ ಶುರು ಮಾಡಿದ್ದಾರೆ‌.

ಒಂದು ಪೋಸ್ಟ್​​ಗೆ ಇಬ್ಬರು ಇನ್ಸ್​​ಪೆಕ್ಟರ್​​ಗಳು ಪೈಪೋಟಿ

ಬೆಂಗಳೂರು ದಕ್ಷಿಣದ ಶಾಸಕ ಕೃಷ್ಣಪ್ಪ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ನಡುವಿನ ಪ್ರತಿಷ್ಠೆಯ ಕೇಂದ್ರವಾಗಿದೆ ಪರಪ್ಪನ ಅಗ್ರಹಾರ ಠಾಣೆ. ಹೀಗಾಗಿ ಸದ್ಯ ಕಳೆದ ತಿಂಗಳು ಪರಪ್ಪನ ಅಗ್ರಹಾರ ಠಾಣೆ ಇನ್ಸ್​​ಪೆಕ್ಟರ್ ಆಗಿ ರಾಘವೇಂದ್ರ ಚಾರ್ಜ್ ತೆಗೆದುಕೊಂಡಿದ್ರು‌. ಇದನ್ನ ಫೇಸ್​​ಬುಕ್ ನಲ್ಲಿ ಕೂಡ ಪೊಸ್ಟ್ ಮಾಡಿದ್ರು‌. ಇನ್ನು ರಾಘವೇಂದ್ರ ಅವರು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆತ್ಮೀಯರಾದ ಕಾರಣ ಇನ್ಸ್​​ಪೆಕ್ಟರ್ ನಂದಿಶ್ ಪರ ಬ್ಯಾಟ್ ಬೀಸಲು ಮುಂದಾಗಿ ಕೃಷ್ಣಪ್ಪ ನಂದೀಶ್ ಅವರನ್ನು ಮುಂದುವರೆಸುವಂತೆ ಪತ್ರ ನೀಡಿದ್ದಾರೆ.

ಸದ್ಯ ನಂದೀಶ್ ಅವರೇ ಠಾಣಾಧಿಕಾರಿಯಾಗಿ ಮುಂದುವರಿಕೆಯಾಗಿದ್ದಾರೆ. ಆದರೆ ಇಬ್ಬರೂ ಕೂಡ ಒಂದೇ ಪೋಸ್ಟ್‌ಗೆ ಪೈಪೋಟಿ ಮಾಡಿದ ಕಾರಣ ಸದ್ಯ ಹಿರಿಯಾಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ABOUT THE AUTHOR

...view details