ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಸಹಕರಿಸದ ಆಸ್ಪತ್ರೆ ಹಾಗೂ ಲ್ಯಾಬ್ಗಳಿಗೆ ನೋಟಿಸ್ ನೀಡಿ ಸೀಜ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಹಲವು ಆಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳಾಗಿ ಮಾರ್ಪಾಟ್ಟಿವೆ. ಈ ಮಧ್ಯೆ ನಾನ್ ಕೋವಿಡ್ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಯಾವುದೇ ಆಸ್ಪತ್ರೆಗಳಿಗೆ ಹೋದರೂ ಅಲ್ಲಿ 'ನೋ ಬೆಡ್' ಎಂಬ ಬೋರ್ಡ್ ಕಾಣ ಸಿಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಎರಡು ಆಸ್ಪತ್ರೆಗಳಲ್ಲೂ ರೋಗಿಗಳಿಂದ ತುಂಬಿ ಹೋಗಿವೆ. ಒಂದು ಕಡೆ ಕೋವಿಡ್ ಸೋಂಕಿತರು ಮತ್ತೊಂದು ಕಡೆ ನಾನ್ ಕೋವಿಡ್ ರೋಗಿಗಳ ಚಿಕಿತ್ಸೆ ಈ ಮಧ್ಯೆ ಕೋವಿಡ್ ಲಸಿಕಾ ಕಾರ್ಯಕ್ರಮಗಳನ್ನ ನಡೆಸಲಾಗುತ್ತಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಗೆ ಹಾಗೂ ಚಿಕಿತ್ಸೆಗೆ ಅಧಿಕ ಶುಲ್ಕ ಪಡೆದುಕೊಳ್ತಿದ್ಯಾ ಅನ್ನೋ ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲೆ ಲಸಿಕೆಯನ್ನ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಗೆ 250 ರುಪಾಯಿ ನಿಗದಿ ಮಾಡಲಾಗಿದೆ. ಆದರೆ, ಇತ್ತೀಚಿಗೆ ಲಸಿಕೆ ಖಾಲಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗೇ, ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಶುಲ್ಕ ಕಟ್ಟಲು ಆಗದೇ ಜನರೇ ಸ್ವತಃ ಸರ್ಕಾರಿ ಕೋಟಾದಡಿ ಹೋಗುತ್ತಿದ್ದು, ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗೆ ಬ್ರೇಕ್ ಹಾಕಿದ್ದಾರೆ. ಯಾಕೆಂದರೆ ಕೋವಿಡ್ ಚಿಕಿತ್ಸಾ ವಿವರಗಳನ್ನ ಆರೋಗ್ಯ ಇಲಾಖೆಗೆ ಅಪಡೇಟ್ ಮಾಡಬೇಕಿರುವ ಕಾರಣಕ್ಕೆ ಸದ್ಯ ದುಬಾರಿ ಶುಲ್ಕ ಪ್ರಮಾಣ ಕಡಿಮೆ ಆಗಿದೆ.
ಸ್ವಾಬ್ ಟೆಸ್ಟ್ ಫಲಿತಾಂಶ ಅಪ್ಲೋಡ್ ಮಾಡದ ಲ್ಯಾಬ್ ಗಳಿಗೆ ಬೀಗ ಮುದ್ರೆ
ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್ಗಳ ಮೇಲೂ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿ ಹಲವು ಲ್ಯಾಬ್ಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ಜನರು ಸ್ವಾಬ್ ಪರೀಕ್ಷೆಗೆ ನೀಡಿ 3 -4 ದಿನಗಳಾದರೂ ನೆಗೆಟಿವ್/ ಪಾಸಿಟಿವ್ ರಿಪೋರ್ಟ್ ಬಾರದೇ, ಬಿಯು ನಂಬರ್ ಸಿಗದೇ ಆಸ್ಪತ್ರೆಗೆ ದಾಖಲಾಗದ ಪರಿಸ್ಥಿತಿ ಉದ್ಭವಿಸಿತ್ತು. ಈ ಕಾರಣಕ್ಕೆ 24 ಗಂಟೆಯೊಳಗೆ ಸ್ವಾಬ್ ಟೆಸ್ಟ್ ಫಲಿತಾಂಶವನ್ನ ಐಸಿಎಂಆರ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲು ಸೂಚನೆ ನೀಡಲಾಗಿತ್ತು. ಆದರೂ ನಗರದ ಕೆಲ ಲ್ಯಾಬ್ಗಳು ಪರೀಕ್ಷಾ ಫಲಿತಾಂಶವನ್ನ ತಡವಾಗಿ ಅಪ್ಲೋಡ್ ಮಾಡಿದ ಕಾರಣಕ್ಕೆ ಕಾರಣ ಕೇಳಿ ನೋಟಿಸ್ ನೀಡಿ ಲ್ಯಾಬ್ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.
ಶೋಕಾಸ್ ನೋಟಿಸ್ ಜೊತೆಗೆ ಬೀಗ ಮುದ್ರೆ ಬಿದ್ದ ಲ್ಯಾಬ್ಗಳು
- ಮೆಡಲ್ ಲ್ಯಾಬ್
- ಆರತಿ ಲ್ಯಾಬ್
- ಆರ್ ವಿ ಮೆಟ್ರೋ ಪಾಲಿಸ್ ಲ್ಯಾಬ್
- ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜು