ಕರ್ನಾಟಕ

karnataka

ETV Bharat / state

ಸಿಎಂ ಭೇಟಿ ಮಾಡಿದ ಹಿಂದುಳಿದ, ದಲಿತ ಮಠಾಧೀಶರ ನಿಯೋಗ : ಪಠ್ಯ ಲೋಪ ಸರಿಪಡಿಸಲು ಕಾಗಿನೆಲೆ ಶ್ರೀ ಮನವಿ

ಹಿಂದುಳಿದ, ದಲಿತ ಮಠಾಧೀಶರ ನಿಯೋಗ ಸೋಮವಾರ ಸಿಎಂ ಭೇಟಿ ಮಾಡಿ, ಪಠ್ಯದಲ್ಲಿ ಆದ ಲೋಪವನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿತು. ಕನಕದಾಸರ ಜೀವನ ಚರಿತ್ರೆ ಕಡೆಗಣನೆ ವಿಚಾರವನ್ನು ಸರಿಪಡಿಸುವಂತೆ ಕಾಗಿನೆಲೆ ಗುರುಪೀಠದ ನಿರಂಜನಂದಪುರಿ ಶ್ರೀಗಳು ಸಹ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ರು..

By

Published : Jun 27, 2022, 10:11 PM IST

Niranjananandapuri appeals to the CM to correct the mistake in the revised text
ಹಿಂದುಳಿದ, ದಲಿತ ಮಠಾಧೀಶರ ನಿಯೋಗದಿಂದ ಸಿಎಂ ಭೇಟಿ

ಬೆಂಗಳೂರು :ಹಿಂದುಳಿದ, ದಲಿತ ಮಠಾಧೀಶರ ನಿಯೋಗ ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದೆ. ಹಿಂದೆ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಯಾದಾಗ 27 ಸಮಿತಿಗಳಿದ್ದು, 172 ಜನ ವಿಷಯ ತಜ್ಞರು ಅಧ್ಯಾಪಕರು ಈ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆಂದು ಕೇಳಿದ್ದೇವೆ. ಆದರೆ, ಮರು ಪರಿಷ್ಕರಣೆಗೆ ಹತ್ತಾರು ಜನರ ಒಂದೇ ಸಮಿತಿಯನ್ನು ನೇಮಿಸಿದ್ದು, ಅದರಲ್ಲಿ ಒಬ್ಬರ ಹೊರತಾಗಿ ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದವರೆಂದು ತಿಳಿದು ಬಂದಿದೆ. ಹಾಗಾಗಿ, ಇದು ಅನುಚಿತ ಎಂದು ನೇರವಾಗಿ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿತು.

ಹಿಂದುಳಿದ, ದಲಿತ ಮಠಾಧೀಶರ ನಿಯೋಗದಿಂದ ಸಿಎಂ ಭೇಟಿ

ಮರು ಪರಿಷ್ಕರಣೆ ಮಾಡುವಾಗ ವಿಶೇಷವಾಗಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗದವರಿಗೆ ಅನ್ಯಾಯ ಮಾಡಲಾಗಿದೆ. ಕನ್ನಡ ಭಾಷಾ ಪಠ್ಯಗಳಿಂದ ಎಲ್ಲಾ ಹಿಂದುಳಿದ, ದಲಿತ ಬರಹಗಾರರ ಪಾಠಗಳನ್ನು ತೆಗೆಯಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ 10 ಪಾಠ ಹಾಕಿದ್ದು, ಸಂತೋಷದ ಸಂಗತಿಯಾಗಿದೆ. ಆದರೆ, ಹೀಗೆ ಮಾಡುವಾಗ ಹಿಂದುಳಿದ, ದಲಿತ ಬರಹಗಾರರ ಪಾಠಗಳಿಗೆ ಬದಲಾಗಿ ಕುವೆಂಪು ಪಾಠ ಹಾಕಲಾಗಿದೆ. ಕುವೆಂಪುರವರ ಬದುಕಿದ್ದರೆ ಅವರೇ ಇದನ್ನು ಒಪ್ಪುತ್ತಿರಲಿಲ್ಲ ಎಂದಿದ್ದಾರೆ.

ದಲಿತ ಸಾಧಕರಿಗೆ ಅನ್ಯಾಯ : ಡಾ.ಅಂಬೇಡ್ಕರ್ ಮತ್ತು ಬುದ್ದ ಗುರುವಿನ ಬಗ್ಗೆ ಇದ್ದ ಕನ್ನಡ ಪದ್ಯಗಳನ್ನು ಕಿತ್ತು ಹಾಕಲಾಗಿದ್ದು, ಇದು ಸರಿಯಲ್ಲ. ಸಮಾಜ ವಿಜ್ಞಾನ ಪಠ್ಯಗಳಲ್ಲಿ ಹಿಂದುಳಿದ ಮತ್ತು ದಲಿತ ಸಾಧಕರಿಗೆ ಸಾಕಷ್ಟು ಅನ್ಯಾಯ ಮಾಡಲಾಗಿದೆ. ಈ ಅನ್ಯಾಯವು ಡಾ. ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಎಂಬ ಕೀರ್ತಿಯಲ್ಲಿ ತೆಗೆಯುವುದರಿಂದ ಆರಂಭವಾಗಿದೆ ಎಂದು ನೇರವಾಗಿ ರೋಹಿತ್ ಚಕ್ರತೀರ್ಥ ಸಮಿತಿಯ ಕಾರ್ಯವೈಖರಿಯನ್ನು ಖಂಡಿಸಿದರು.

ಲೋಪ ಸರಿಪಡಿಸುವಂತೆ ನಿರಂಜನಾನಂದಪುರಿ ಶ್ರೀ ಸಿಎಂಗೆ ಮನವಿ ಮನವಿ

ನಿರಂಜನಂದಪುರಿ ಶ್ರೀಗಳಿಂದ ಸಿಎಂಗೆ ಮನವಿ : ಪಠ್ಯ ಪುಸ್ತಕದಲ್ಲಿ ಕನಕದಾಸರ ಜೀವನ ಚರಿತ್ರೆ ಕಡೆಗಣನೆ ವಿಚಾರವನ್ನು ಸರಿಪಡಿಸುವಂತೆ ಕಾಗಿನೆಲೆ ಗುರುಪೀಠದ ನಿರಂಜನಂದಪುರಿ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಜಿ-20 ಸಭೆ ಆಯೋಜನೆಗೆ ರಾಜ್ಯದಿಂದ ಅಗತ್ಯ ಸಹಕಾರ : ಬಸವರಾಜ ಬೊಮ್ಮಾಯಿ

ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ನಿರಂಜನಾನಂದಪುರಿ ಶ್ರೀಗಳು, ದಾಸಶ್ರೇಷ್ಠ, ಕವಿ ಕನಕದಾಸರ ಜೀವನ ಚರಿತ್ರೆ ಪಠ್ಯ ಪುಸ್ತಕದಿಂದ ಕಡೆಗಣನೆ ಬಗ್ಗೆ ಸಿಎಂ ಗಮನಕ್ಕೆ ತಂದರು. 9ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಒಂದು ಪುಟದಲ್ಲಿದ್ದ ಕನಕದಾಸರ ಪಠ್ಯ ಭಾಗವನ್ನು ಕೇವಲ ಒಂದೇ ಸಾಲಿಗೆ ತಂದು, ಕಡತಗೊಳಿಸಲಾಗಿದೆ. ಈ ಮೂಲಕ ಕನಕದಾಸರ ಆದರ್ಶ ಮತ್ತು ದಾರ್ಶನಿಕ ಸತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details