ಕರ್ನಾಟಕ

karnataka

ETV Bharat / state

ಮುಂದುವರಿದ ಕೊರೊನಾ... ಬೆಂಗಳೂರಿನ ಹೊರವಲಯದಲ್ಲಿ ಸಿದ್ಧವಾಯ್ತು ಮತ್ತೊಂದು ಚಿತಾಗಾರ ! - Cemetery opened in bengalore

ಬೆಂಗಳೂರು ನಗರದ ಚಿತಾಗಾರಗಳಲ್ಲಿ ಗಂಟೆ ಗಟ್ಟಲೆ ಮೃತದೇಹಗಳನ್ನಿಟ್ಟುಕೊಂಡು ಸಾಲು ಸಾಲಾಗಿ ಆ್ಯಂಬುಲೆನ್ಸ್‌ಗಳು ನಿಲ್ಲುತ್ತಿದ್ದವು. ಈ ಸಮಸ್ಯೆ ಬಗೆಹರಿಸಲು ನಗರದ ಹೊರವಲಯದಲ್ಲಿ ಚಿತಾಗಾರಗಳನ್ನ ನಿರ್ಮಿಸಲಾಗಿದೆ.

new-cemetery-opened-in-bengalore
ಬೆಂಗಳೂರಿನ ಹೊರವಲಯದಲ್ಲಿ ಚಿತಾಗಾರ ನಿರ್ಮಾಣ

By

Published : Apr 30, 2021, 8:25 PM IST

Updated : May 10, 2021, 10:40 AM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಅಲೆ ನಿರಂತರವಾಗಿದ್ದು, ಸಾವಿನ ಸಂಖ್ಯೆ ಮಿತಿಮೀರುತ್ತಿದೆ. ಪರಿಣಾಮ ಚಿತಾಗಾರಗಳಲ್ಲಿ ಶವ ಸುಡಲು ಸಾಲು ಸಾಲಾಗಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ, ನಗರದ ಗಿಡ್ಡೆನಹಳ್ಳಿಯಲ್ಲಿ ಇದೀಗ ಮತ್ತೊಂದು ತಾತ್ಕಾಲಿಕ ಚಿತಾಗಾರ ಸಿದ್ದವಾಗಿದೆ.

ಈ‌ ಮೊದಲು ನಗರದ ಹೊರವಲಯದ ತಾವರೆಕೆರೆ-ಕೆಂಗೇರಿ ಮುಖ್ಯ ರಸ್ತೆಯ ಚೆನ್ನೇನಹಳ್ಳಿ ಗ್ರಾಮದಲ್ಲಿ, ಕುರುಬರಹಳ್ಳಿಯ 4 ಎಕರೆಯ ಸ್ಥಳದಲ್ಲಿ ಚಿತಾಗಾರ ಸಿದ್ಧ ಪಡಿಸಲಾಗಿತ್ತು. ಇದೀಗ ಮತ್ತೊಂದು‌ ಚಿತಾಗಾರ ಸಿದ್ಧಪಡಿಸಿದ್ದು, ಏಕಕಾಲದಲ್ಲಿ ಸುಮಾರು ಇಪ್ಪತ್ತು ಮೃತದೇಹ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ.

ಬೆಂಗಳೂರಿನ ಹೊರವಲಯದಲ್ಲಿ ಸಿದ್ಧವಾಯ್ತು ಮತ್ತೊಂದು ಚಿತಾಗಾರ

ನಗರದ ಚಿತಾಗಾರಗಳಲ್ಲಿ ಗಂಟೆ ಗಟ್ಟಲೆ ಮೃತದೇಹಗಳನ್ನಿಟ್ಟುಕೊಂಡು ಸಾಲು ಸಾಲಾಗಿ ಆ್ಯಂಬುಲೆನ್ಸ್‌ಗಳು ನಿಲ್ಲುತ್ತಿದ್ದವು. ಈ ಸಮಸ್ಯೆ ಬಗೆಹರಿಸಲು ನಗರದ ಹೊರವಲಯದಲ್ಲಿ ಚಿತಾಗಾರಗಳನ್ನ ನಿರ್ಮಿಸಲಾಗಿದೆ. ಈ ಸಂಬಂಧ ಮಾವಳ್ಳಿಪುರಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಆರ್ ಅಶೋಕ್, ತಾತ್ಕಾಲಿಕವಾಗಿ ನಿರ್ಮಾಣವಾದ ಸ್ಮಶಾನಕ್ಕಾಗಿ ಗುರುತಿಸಿರುವ ಜಾಗದ ಪರಿಶೀಲನೆ ನಡೆಸಿದ್ದಾರೆ.

ಓದಿ:ಕಮಿಷನ್ ಹೊಡೆಯುವುದು ಸಾಕು, ಖಾಸಗಿ ಆಸ್ಪತ್ರೆಗಳ ಬಿಲ್ ಕ್ಲಿಯರ್ ಮಾಡಿ: ಡಿಕೆಶಿ

Last Updated : May 10, 2021, 10:40 AM IST

ABOUT THE AUTHOR

...view details