ಕರ್ನಾಟಕ

karnataka

ETV Bharat / state

ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ನೇಪಾಳಿ ಮಹಿಳೆ: ನೇಣುಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರವಾಗಿ ಪತ್ತೆ

ಗಂಡನ ಜೊತೆ ಜಗಳ ಮಾಡಿಕೊಂಡು ಮನೆಬಿಟ್ಟು ಹೋಗಿದ್ದ ಮಹಿಳೆ ಮತ್ತೆ ಮನೆಗೆ ವಾಪಸ್​​​ ಆಗದ ಹಿನ್ನೆಲೆ ಗಂಡ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದನು.

By

Published : Feb 3, 2023, 2:02 PM IST

Updated : Feb 3, 2023, 7:18 PM IST

Hulimavu Police station
ಹುಲಿಮಾವು ಪೊಲೀಸ್​ ಠಾಣೆ

ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಮಾಹಿತಿ

ಬೆಂಗಳೂರು: ಮಲಯಾಳಂನ ಖ್ಯಾತ ಥ್ರಿಲ್ಲರ್ ಸಿನಿಮಾ 'ಕೋಲ್ಡ್ ಕೇಸ್'ನ ಕಥಾಹಂದರ ನೆನಪಿಸುವಂತೆ ನಿರ್ಜನ ಪ್ರದೇಶದಲ್ಲಿ, ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಅಸ್ಥಿಪಂಜರದ ಮೂಲ ಪತ್ತೆಹಚ್ಚುವಲ್ಲಿ ಹುಳಿಮಾವು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್​ಮೆಂಟ್ ಒಂದರ ಹಿಂಭಾಗದ ನಿರ್ಜನ ಪ್ರದೇಶದ ಪೊದೆಗಳ ನಡುವೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಸ್ಥಿಪಂಜರ ನೇಪಾಳ ಮೂಲದ ಪುಷ್ಪಾ ದಾಮಿ (22) ಎಂಬ ಮಹಿಳೆಯದ್ದು ಎಂಬುದು ಪತ್ತೆಯಾಗಿದೆ.

ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪತ್ನಿಗಾಗಿ ಹುಡುಕಾಡುತ್ತಿದ್ದ ಪತಿ:ನೇಪಾಳ ಮೂಲದ ಪುಷ್ಪಾ ದಾಮಿ ಹಾಗೂ ಆಕೆಯ ಪತಿ ಅಮರ್ ದಾಮಿ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ವಾಸವಿದ್ದರು. ಪತಿಯ ಮದ್ಯಪಾನದ ಚಟಕ್ಕೆ ಬೇಸತ್ತ ಪುಷ್ಪಾ ನೇಪಾಳಕ್ಕೆ ಹೋಗಲು ಬಯಸಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಗಳಾಗುತ್ತಿದ್ದವು. ಕಳೆದ ಜುಲೈ 8ರಂದು ಗಂಡನ ಮೇಲೆ ಕೋಪಗೊಂಡು ಮನೆಯಿಂದ ತೆರಳಿದ್ದ ಪುಷ್ಪಾ ಪುನಃ ವಾಪಸ್​ ಆಗಿರಲಿಲ್ಲ. ಪತ್ನಿ ಕಾಣೆಯಾಗಿರುವ ಬಗ್ಗೆ ಹುಳಿಮಾವು ಠಾಣೆಯಲ್ಲಿ ಅಮರ್ ದಾಮಿ ಪ್ರಕರಣ ದಾಖಲಿಸಿದ್ದ.

ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಮಾಧ್ಯಮಗಳಿಗೆ ಮಾಹಿತಿ ನೀಡಿ, ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಬೆಳಗ್ಗೆ 9.30- 10ರ ಸುಮಾರಿಗೆ ಹುಳಿಮಾವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್​ಮೆಂಟ್​ ಒಂದರ ಹಿಂದೆ ಪೊದೆಗಳು ತುಂಬಿ ಕಾಡಿನಂತಿರುವ ಜಾಗದಲ್ಲಿ ಮನುಷ್ಯನ ತಲೆಬುರುಡೆ, ಮೂಳೆಗಳು ಪತ್ತೆಯಾಗಿದ್ದವು. ಅಸ್ತಿಪಂಜರದ ಮೇಲಿದ್ದ ಹಳೇಯ ಚಪ್ಪಲಿ, ಕುತ್ತಿಗೆಯಲ್ಲಿದ್ದ ನೆಕ್ಲೆಸ್​ ಹಾಗೂ ಇತರ ಕೆಲವು ವಸ್ತುಗಳ ಅಲ್ಲೆ ಅಕ್ಕಪಕ್ಕದಲ್ಲಿ ಸಿಕ್ಕಿದ್ದವು. ಅಲ್ಲಿ ಹೆಚ್ಚು ಜನರ ಓಡಾಟ ಇಲ್ಲದ ನಿರ್ಜನ ಪ್ರದೇಶವಾಗಿದ್ದ ಕಾರಣ ಆ ವಸ್ತುಗಳ್ನು ಯಾರೂ ಸ್ಪರ್ಶಿಸಿದಂತಿಲ್ಲ.

ಸ್ಥಳದಲ್ಲಿ ದೊರೆತ ವಸ್ತುಗಳನ್ನೆಲ್ಲ ನಮ್ಮ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅವುಗಳ ಪರಿಶೀಲನೆ ನಡೆಸಿ, ನಮ್ಮಲ್ಲಿ ಕಳೆದ ಒಂದು ವರ್ಷಗಳಿಂದ ದಾಖಲಾದ ನಾಪತ್ತೆ ಪ್ರಕರಣಗಳ ಜೊತೆ ತನಿಖೆ ನಡೆಸಿದೆವು. ಅದರಲ್ಲಿ ನಮ್ಮ ಹುಳಿಮಾವು ಪೊಲೀಸ್​ ಠಾಣೆಯಲ್ಲಿ ಜುಲೈ 8ನೇ ತಾರೀಕು ಮಹಿಳೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ನೇಪಾಳ ಮೂಲದ ಮಹಿಳೆಯೊಬ್ಬರು ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ನೇಪಾಳ ಮೂಲದ ಕಾರ್ಮಿಕನೋರ್ವನ ಪತ್ನಿ. ಎರಡು ವರ್ಷದ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು.

ಅವರಿಗೆ ಒಂದು ಮಗು ಕೂಡ ಇದೆ. ಇಬ್ಬರ ಮಧ್ಯೆ ಸಣ್ಣ ಪುಟ್ಟ ವಿಷಯಕ್ಕೆ ಜಗಳಗಳಾಗುತ್ತಿದ್ದು, ಮಹಿಳೆ ಮನೆ ಬಿಟ್ಟು ಹೋದವರು ಹಿಂದೆ ಬಂದಿರಲಿಲ್ಲ. ಆಗ ಪತಿ ಪತ್ನಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಆ ಸಮಯದಲ್ಲಿ ಹಳಿಮಾವು ಪೊಲೀಸ್​ ಠಾಣೆ ಪೊಲೀಸರು ಹುಡುಕುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ದೂರು ದಾಖಲಿಸಿದ ಸಮಯದಲ್ಲಿ ಅವರು ನೀಡಿದ್ದ ಮಾಹಿತಿ ಆಧಾರವಾಗಿಟ್ಟುಕೊಂಡು ಕೂಲಂಕಷವಾಗಿ ಪರಿಶೀಲಿಸಿದಾಗ ಪತ್ತೆಯಾದ ಅಸ್ಥಿಪಂಜರ ಪುಷ್ಪಾ ದಾಮಿಯದ್ದು ಮತ್ತು ಆತ್ಮಹತ್ಯೆಗೆ ಶರಣಾಗಿರುವುದು ಬಯಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ವಿಚ್ಛೇದಿತ ಪತಿ ಹತ್ಯೆ ಮಾಡಲು ಮಾಜಿ ಪತ್ನಿ ಸುಪಾರಿ ಆರೋಪ: ದೂರು ದಾಖಲು

Last Updated : Feb 3, 2023, 7:18 PM IST

ABOUT THE AUTHOR

...view details