ಕರ್ನಾಟಕ

karnataka

By

Published : Dec 23, 2022, 4:39 PM IST

ETV Bharat / state

ಪ್ರಚಾರಕ್ಕೆ ಕಾರು ಪಡೆದು ವಾಪಸ್ ನೀಡದೇ ಧಮ್ಕಿ ಹಾಕಿದ ಆರೋಪ: ನಲಪಾಡ್ ವಿರುದ್ಧ ದೂರು

ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.

ನಲಪಾಡ್
ನಲಪಾಡ್

ಬೆಂಗಳೂರು: ಪ್ರಚಾರಕ್ಕೆಂದು ಸ್ನೇಹಿತನ ಕಾರು ಪಡೆದು ವಾಪಸ್ ಕೇಳಿದಾಗ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.

ಯೂಥ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ವೇಳೆ ತಮ್ಮ ಫಾರ್ಚೂನರ್ ಕಾರನ್ನು ನಲಪಾಡ್ ಪಡೆದಿದ್ದರು. ಚುನಾವಣೆಯ ಬಳಿಕ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾರೆಂದು ನಲಪಾಡ್ ಸ್ನೇಹಿತ ನಜೀರ್ ಅವರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ‌ ಎನ್​ಸಿಆರ್ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಒತ್ತುವರಿ ತೆರವು ವೇಳೆ ನಲಪಾಡ್​ ವಾಗ್ವಾದ : ತೆರವು ತಡೆಯಲು ಯತ್ನ, ಬಗ್ಗದ ಪಾಲಿಕೆ ಅಧಿಕಾರಿಗಳು

ABOUT THE AUTHOR

...view details