ಬೆಂಗಳೂರು:ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದ ನಾಯಕ, ಶಿಕ್ಷಣ ಪ್ರೇಮಿ, ಮುತ್ಸದ್ದಿ ರಾಜಕಾರಣಿ ಮುರಳಿ ಮನೋಹರ ಜೋಶಿ ಅವರು ನಮಗೆಲ್ಲ ಎಂದೆಂದಿಗೂ ಸ್ಫೂರ್ತಿಯ ಚಿಲುಮೆ ಇಂದು ಆ ಹಿರಿಯ ಚೇತನ ಜನ್ಮದಿನ. ಅವರಿಗೆ ಆಯುರಾರೋಗ್ಯವನ್ನು ಭಗವಂತ ನೀಡಲಿ ಎಂದು ಸಿಎಂ ಬಿ.ಎಸ್.ವೈ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಇನ್ನೂ ಪ್ರಧಾನಿ ಮೋದಿ ಕೂಡಮುರಳಿ ಮನೋಹರ ಜೋಶಿ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಅಲ್ಲದೆ ಅವರ ಮನೆಗೆ ಭೇಟಿ ನೀಡಿ ಶುಭಕೋರಿದ್ದಾರೆ.