ಕರ್ನಾಟಕ

karnataka

ಹೆಚ್ಚಿನ ರೆಮ್ಡೆಸಿವಿರ್ ಸಂಗ್ರಹಿಸಿಟ್ಟಿಲ್ಲ, ಯಾವುದೇ ತನಿಖೆಗೆ ಸಿದ್ಧ: ಸಂಸದ ಉಮೇಶ್ ಜಾಧವ್

By

Published : May 3, 2021, 1:09 PM IST

Updated : May 3, 2021, 3:01 PM IST

ನಾಳೆ ಕೊರೊನಾ ವೈರಸ್‌ನಿಂದ ನಾನು ಇರುತ್ತೇನೋ ಇರುವುದಿಲ್ಲವೋ ಗೊತ್ತಿಲ್ಲ, ಅಂತಹ ಪರಿಸ್ಥಿತಿ ಇದೆ. ಎಲ್ಲರೂ ಒಟ್ಟಾಗಿ ಕೆಲಸಮಾಡಬೇಕು. 15 ದಿವಸದ ನಂತರ ಮ್ಯಾನ್ ಪವರ್ ಕೊರತೆಯಾಗಲಿದೆ. ಅಧಿಕಾರಿಗಳ ಕೆಲ ಲೋಪ ಇರಬಹುದು. ಈಗ ಒಟ್ಟಾಗಿ ಎಲ್ಲರೂ ಕೆಲಸ ಮಾಡಬೇಕಿದೆ..

ಸಂಸದ ಉಮೇಶ್ ಜಾಧವ್ ಸುದ್ದಿಗೋಷ್ಟಿ
ಸಂಸದ ಉಮೇಶ್ ಜಾಧವ್ ಸುದ್ದಿಗೋಷ್ಟಿ

ಬೆಂಗಳೂರು : ನನ್ನ ಕೋಟಾ ಬಿಟ್ಟು ಹೆಚ್ಚು ರೆಮ್ಡೆಸಿವಿರ್ ಇಂಜಕ್ಷನ್ ತಗೊಂಡಿಲ್ಲ. ಯಾವುದೇ ತನಿಖೆ ಬೇಕಾದರೆ ಮಾಡಲಿ ಎಂದು ಸಂಸದ ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರೆಮ್ಡೆಸಿವಿರ್ ಔಷಧವನ್ನು ಸಂಗ್ರಹಿಸಿಟ್ಟಿರುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು. ನಾನು ಹೆಚ್ಚುವರಿ ರೆಮ್ಡೆಸಿವಿರ್ ಔಷಧವನ್ನು ಸಂಗ್ರಹಿಸಿಟ್ಟಿರಲಿಲ್ಲ.

ಸಂಸದ ಉಮೇಶ್ ಜಾಧವ್ ಸುದ್ದಿಗೋಷ್ಟಿ

ಡಿಕೆಶಿ ಅವರಿಗೆ ಆ ಮಾಹಿತಿ ಇಲ್ಲ. ಹೀಗಾಗಿ, ಅವರು ಆರೋಪ ಮಾಡಿದ್ದಾರೆ.‌ ನಾನು ಅವರಿಗೆ ಎಲ್ಲಾ‌ ಮಾಹಿತಿ ನೀಡುತ್ತೇನೆ. ನಾನೇ ಖುದ್ದು ಡ್ರಗ್ ಕಂಟ್ರೋಲರ್‌ಗೆ ಮಾತನಾಡಿ ರೆಮ್ಡೆಸಿವಿರ್ ಔಷಧವನ್ನು ಬೆಂಗಳೂರಿನಿಂದ ಗುಲ್ಬರ್ಗಕ್ಕೆ ವಿಮಾನದಲ್ಲಿ ಕಳಿಸಲಾಗಿದೆ ಎಂದರು.

ಕಲಬುರಗಿಯಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ಇದೆ ಎಂದು ಜಿಲ್ಲೆಯ ಅಧಿಕಾರಿಗಳು ಹೇಳಿದ್ದರು. ಆಗ ನಾನು ಕೂಡಲೇ ಬೆಂಗಳೂರಿನ ಡ್ರಗ್ ಕಂಟ್ರೋಲರ್‌ನ ಭೇಟಿಯಾಗಿ ನಮ್ಮ ಕೋಟಾದ ರೆಮ್ಡೆಸಿವಿರ್ ಔಷಧ ಬೇಗ ಕಳಿಸಿಕೊಡುವಂತೆ ಮನವಿ ಮಾಡಿದ್ದೆ.

ಈಗಾಗಲೇ ಕಲಬುರಗಿಗೆ ಕಳಿಸಿಕೊಡಲಾಗಿದೆ ಎಂದು ಅಧಿಕಾರಿ ತಿಳಿದಿದ್ದರು. ಆದರೆ, ಏ.22-25 ಆದರೂ ಔಷಧ ಬಂದಿರಲಿಲ್ಲ. ಹಾಗಾಗಿ, ಮತ್ತೆ ಡ್ರಗ್ ಕಂಟ್ರೋಲರ್‌ನ ಭೇಟಿಯಾಗಿ 480 ವಯಲ್ ರೆಮ್ಡೆಸಿವಿರ್ ಔಷಧ ಕೊಡುವಂತೆ ಮನವಿ ಮಾಡಿದೆ.

ಮಧ್ಯರಾತ್ರಿಯೇ ಆ ಔಷಧವನ್ನು ಬೆಂಗಳೂರಿನಿಂದ ವಿಮಾನದ ಮೂಲಕ ಕಲಬುರಗಿಗೆ ಕೊಂಡೊಯ್ಯಲಾಯಿತು. ಅದನ್ನು ಬಳಿಕ ಕಲಬುರಗಿಯಲ್ಲಿನ ಡ್ರಗ್ ಕಂಟ್ರೊಲರ್ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಕಲಬುರಗಿ ಕೋಟಾದ ರೆಮ್ಡೆಸಿವಿರ್ ಔಷಧವನ್ನು ಕೊರತೆ ಹಿನ್ನೆಲೆ ನಾನೂ ಖುದ್ದು ವಿಮಾನದ ಮೂಲಕ ಕೊಂಡೊಯ್ದಿದ್ದೆ.

ಅದನ್ನು ಡಿಕೆಶಿ ತಪ್ಪಾಗಿ ಅರ್ಥೈಸಿದ್ದಾರೆ. ಇದರಿಂದ ನನಗೆ ನೋವಾಗಿದೆ. ಇದನ್ನು ವಿವಾದ ಮಾಡಬಾರದು. ನಾನು ಯಾವುದೇ ತನಿಖೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದರು. ಕೊರೊನಾ ವೈರಸ್ ಯಾರನ್ನೂ ಬಿಡುತ್ತಿಲ್ಲ. ಕಲಬುರಗಿಯಲ್ಲಿ ರೆಮ್ಡಿಸಿವಿರ್ ಔಷಧ ಸಿಗುತ್ತಿದೆ.

ನಾಳೆ ಕೊರೊನಾ ವೈರಸ್‌ನಿಂದ ನಾನು ಇರುತ್ತೇನೋ ಇರುವುದಿಲ್ಲವೋ ಗೊತ್ತಿಲ್ಲ, ಅಂತಹ ಪರಿಸ್ಥಿತಿ ಇದೆ. ಎಲ್ಲರೂ ಒಟ್ಟಾಗಿ ಕೆಲಸಮಾಡಬೇಕು. 15 ದಿವಸದ ನಂತರ ಮ್ಯಾನ್ ಪವರ್ ಕೊರತೆಯಾಗಲಿದೆ. ಅಧಿಕಾರಿಗಳ ಕೆಲ ಲೋಪ ಇರಬಹುದು.

ಆದರೆ, ಎಲ್ಲರೂ ಒಟ್ಟಾಗಿ ಕೆಲಸಮಾಡಬೇಕು. ಈ‌ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಲಿದೆ. ಆಕ್ಸಿಜನ್ ಕೊರತೆ ಹೆಚ್ಚಾಗಲಿದೆ. ಇದನ್ನು ಸರಿಪಡಿಸುವ ಅಗತ್ಯ ಇದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಚಾಮರಾಜನಗರದಲ್ಲಿ 24 ಕೋವಿಡ್​ ಸೋಂಕಿತರ ಸಾವು; ಅಷ್ಟಕ್ಕೂ ಆಸ್ಪತ್ರೆಯಲ್ಲಿ ಆಗಿದ್ದೇನು?

Last Updated : May 3, 2021, 3:01 PM IST

ABOUT THE AUTHOR

...view details