ಕರ್ನಾಟಕ

karnataka

ETV Bharat / state

ಅಪ್ಪನ ಅನೈತಿಕ ಸಂಬಂಧಕ್ಕೆ ಬೇಸತ್ತು ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ಆತ್ಮಹತ್ಯೆ!

ಅಪ್ಪನ ಅನೈತಿಕ ಸಂಬಂಧ ಮತ್ತು ವರ್ತನೆ ಸರಿ ಇಲ್ಲದ ಕಾರಣವನ್ನ ವಾಟ್ಸಪ್​​​ ಸ್ಟೇಟಸ್​​ಗೆ ಹಾಕಿ ತನ್ನ ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ನೇಣಿಗೆ ಶರಣಾಗಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

By

Published : Aug 12, 2019, 11:09 PM IST

Updated : Aug 12, 2019, 11:18 PM IST

ಆತ್ಮಹತ್ಯೆಗೆ ಶರಣಾದ ತಾಯಿ- ಮಕ್ಕಳು

ಬೆಂಗಳೂರು:ಗಂಡನ ದುರ್ವತನೆಗೆ ಬೇಸತ್ತು ಹೆಂಡತಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ತಂದೆಯ ಅನೈತಿಕ ಸಂಬಂಧ ಮತ್ತು ವರ್ತನೆ ಸರಿ ಇಲ್ಲದ ಕಾರಣವನ್ನ ವಾಟ್ಸಪ್​​​ ಸ್ಟೇಟಸ್​​ಗೆ ಹಾಕಿ ತನ್ನ ತಾಯಿ ಜೊತೆ ಇಬ್ಬರು ಹೆಣ್ಣುಮಕ್ಕಳು ನೇಣಿಗೆ ಶರಣಾಗಿದ್ದಾರೆ. ರಾಜೇಶ್ವರಿ (43) ಹಾಗೂ ಮಕ್ಕಳಾದ ಮಾನಸ (17), ಭೂಮಿಕ (15) ಮೃತ ದುರ್ದೈವಿಗಳು.

ಮೂಲತ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದ @ ಸಿದ್ದಯ್ಯ ಎಂಬಾತನನ್ನ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಇದ್ರು. ಸಿದ್ದಯ್ಯ ಮೊದಲು ಆಟೋ ಓಡಿಸುತ್ತಿದ್ದ. ಶೋಕಿಲಾಲನಾಗಿದ್ದ ಸಿದ್ದಯ್ಯ ಬೇರೆ ಬೇರೆ ಹೆಣ್ಣುಗಳ ಶೋಕಿಗೆ ಬಿದ್ದಿದ್ದ. ಅದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೆ ಜಗಳವಾಗುತ್ತಿತ್ತಂತೆ.

ಆದ್ರೆ ತನ್ನ ಕುಟುಂಬವನ್ನ ಟ್ರಿಪ್​ಗೆ ಕರೆದುಕೊಂಡು ಹೋಗುವ ಬದಲು ಬೇರೆ ಹೆಂಗಸಿನ ಜೊತೆ ಟ್ರಿಪ್ ಹೋಗಿರುವುದು ಪತ್ನಿ ರಾಜೇಶ್ವರಿ ಮತ್ತು ಇಬ್ಬರು ಮಕ್ಕಳಿಗೆ ಗೊತ್ತಾಗಿತ್ತು. ಇದೇ ವಿಚಾರಕ್ಕೆ ಬೇಸತ್ತು ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಆರೋಪಿ ಸಿದ್ದಯ್ಯ ತಮಿಳುನಾಡು ಟ್ರಿಪ್​​ನಲ್ಲಿದ್ದಾನೆ. ಮೃತರ ಪೋಷಕರು ಸಿದ್ದಯ್ಯನ‌ ಕಿರುಕುಳದ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Aug 12, 2019, 11:18 PM IST

ABOUT THE AUTHOR

...view details