ಕರ್ನಾಟಕ

karnataka

ETV Bharat / state

ಮನೆಗೆ ಬೀಗ ಹಾಕಿ ದೇವರ ದರ್ಶನಕ್ಕೆ ತೆರಳಿದ ಕುಟುಂಬ, 10 ಲಕ್ಷ ದೋಚಿ ಪರಾರಿಯಾದ ಕಳ್ಳರು! - ಬೆಂಗಳೂರಿನಲ್ಲಿ 10 ಲಕ್ಷ ದರೋಡೆ,

ಮನೆಗೆ ಬೀಗ ಹಾಕಿ ದೇವರ ದರ್ಶನಕ್ಕೆಂದು ಕುಟುಂಬ ತೆರಳಿದ್ದು, ಕಳ್ಳರು ಸುಮಾರು 10 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

10 lakh rupees robbery, 10 lakh rupees robbery in Bangalore, Bangalore crime news, 10 ಲಕ್ಷ ದರೋಡೆ, ಬೆಂಗಳೂರಿನಲ್ಲಿ 10 ಲಕ್ಷ ದರೋಡೆ, ಬೆಂಗಳೂರು ಅಪರಾಧ ಸುದ್ದಿ,
10 ಲಕ್ಷ ದೋಚಿ ಪರಾರಿಯಾದ ಕಳ್ಳರು

By

Published : Apr 20, 2021, 4:55 AM IST

ನೆಲಮಂಗಲ:ಮನೆಗೆ ಬೀಗ ಹಾಕಿ ಕುಟುಂಬದ ಸದಸ್ಯರು ದೇವಾಲಯಕ್ಕೆ ತೆರಳಿದ್ದರು. ಇದೇ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿ ಸುಮಾರು 10 ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಬೈರವೇಶ್ವರ ಲೇಔಟ್​ನಲ್ಲಿನಡೆದಿದೆ.

ಚಿಕ್ಕರಾಮಯ್ಯ ಕುಟುಂಬದವರ ಜೊತೆ ಮನೆ ದೇವರಾದ ಗದ್ಧುಗೆ ಮಠದ ದೇವಾಲಯಕ್ಕೆ ತೆರಳಿದ್ದರು. ಸಂಜೆ 4 ಗಂಟೆಯ ಸಮಯದಲ್ಲಿ ದೇವಸ್ಥಾನದಿಂದ ಹಿಂದುರುಗಿದ್ದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಯಾರು ಇಲ್ಲದ ಸಮಯದಲ್ಲಿ ಮನೆಯ ಬೀಗ ಹೊಡೆದು ಒಳ ನುಗ್ಗಿದ ಕಳ್ಳರು ಸುಮಾರು 10 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲನೆ ನಡೆಸಿದೆ.

ಈ ಘಟನೆ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details