ಕರ್ನಾಟಕ

karnataka

By

Published : Oct 18, 2019, 4:45 PM IST

Updated : Oct 18, 2019, 4:52 PM IST

ETV Bharat / state

ಎಲ್ಲ ಪಕ್ಷದಲ್ಲೂ ಅಸಮಾಧಾನ ಸಹಜ: ಬೆಳವಣಿಗೆಗಳನ್ನ ಸಮರ್ಥಿಸಿಕೊಂಡ ಜೆಡಿಎಸ್​ ಶಾಸಕ

ಜೆಡಿಎಸ್ ಮುಖಂಡರು ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರು, ಮಂತ್ರಿ ಆಗ್ಬೇಕು ಅಂತ ಎಲ್ಲರಿಗೂ ಆಸೆ ಇರುತ್ತದೆ. ಎಲ್ಲ ಪಕ್ಷದಲ್ಲೂ ಅಸಮಾಧಾನ ಸಹಜ ಎಂದಿದ್ದಾರೆ.

ಎಲ್ಲಾ ಪಕ್ಷದಲ್ಲೂ ಅಸಮಾಧಾನ ಸಹಜ : ಜೆಡಿಎಸ್ ಶಾಸಕ ಸತ್ಯನಾರಾಯಣ

ಬೆಂಗಳೂರು : ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಸತ್ಯನಾರಾಯಣ, ಮಂತ್ರಿ ಆಗ್ಬೇಕು ಅಂತ ಎಲ್ಲರಿಗೂ ಆಸೆ ಇರುತ್ತದೆ. ಆದರೆ, ಎಲ್ಲರಿಗೂ ಮಂತ್ರಿ ಮಾಡೋಕೆ ಆಗುತ್ತಾ. ಈಗ ಯಡಿಯೂರಪ್ಪನವರು ಪರದಾಡ್ತಿಲ್ವಾ? ಎಂದು ಮರು ಪ್ರಶ್ನೆಯನ್ನೂ ಹಾಕಿದ್ದಾರೆ.

ಎಲ್ಲಾ ಪಕ್ಷದಲ್ಲೂ ಅಸಮಾಧಾನ ಸಹಜ : ಜೆಡಿಎಸ್ ಶಾಸಕ ಸತ್ಯನಾರಾಯಣ

ವಿಧಾನಪರಿಷತ್​​ನ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ‌ ಭವನದಲ್ಲಿ ಇಂದು ನಡೆಯುತ್ತಿರುವ ವಿಧಾನಪರಿಷತ್ ಸದಸ್ಯರ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಪಕ್ಷದಲ್ಲೂ ಅಸಮಾಧಾನ ಸಹಜ. ಈಗ ಯಡಿಯೂರಪ್ಪ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ಬಸವರಾಜ ಹೊರಟ್ಟಿಯವರು ಹಿರಿಯ ನಾಯಕರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವರಿಷ್ಠರಿದ್ದಾರೆ. ಅವರು ಎಲ್ಲ ಸರಿಪಡಿಸುತ್ತಾರೆ ಎಂದರು.

ದೇವೇಗೌಡರ ಮೇಲೆ ಐಟಿ ತನಿಖೆ ಆಗಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ತನಿಖೆ ಯಾರ ಮೇಲಾದ್ರೂ ಆಗಬಹುದು. ಇಲ್ಲಿ ಯಾರೂ ಅತೀತರಲ್ಲ. ರಾಷ್ಟ್ರಪತಿಗಳ ಮೇಲೂ ತನಿಖೆ ಮಾಡಬಹುದು, ಪಂಚಾಯಿತಿ ಸದಸ್ಯನ ಮೇಲೂ ತನಿಖೆ ಮಾಡಬಹುದು ಎಂದು ಹೇಳಿದರು.

Last Updated : Oct 18, 2019, 4:52 PM IST

ABOUT THE AUTHOR

...view details