ಕರ್ನಾಟಕ

karnataka

By

Published : Sep 2, 2021, 4:39 PM IST

ETV Bharat / state

ಹುದ್ದೆ ಕಡಿತ ವಿರೋಧಿಸಿ ಸಚಿವಾಲಯ ನೌಕರರ ಸಂಘದಿಂದ ಧರಣಿ

ಇಂದು ಸಚಿವಾಲಯ ನೌಕರರ ಸಂಘದ ಕಾರ್ಯಕರ್ತರು ಸರ್ಕಾರದ ಆಡಳಿತ ಸುಧಾರಣೆ, ವಿವಿಧ ಹುದ್ದೆಗಳ ಕಡಿತ ವಿರೋಧಿಸಿ ಪ್ರತಿಭಟನೆ ನಡೆಸಿದರು.

Ministry Employees Association protest
ಸಚಿವಾಲಯ ನೌಕರರ ಸಂಘದ ಧರಣಿ

ಬೆಂಗಳೂರು:ಸರ್ಕಾರದ ಆಡಳಿತ ಸುಧಾರಣೆ, ವಿವಿಧ ಹುದ್ದೆಗಳ ಕಡಿತ ವಿರೋಧಿಸಿ ಸಚಿವಾಲಯ ನೌಕರರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ಎಂಎಸ್ ಬಿಲ್ಡಿಂಗ್ ಎದುರು ನಡೆದ ಪ್ರತಿಭಟನೆಯಲ್ಲಿ ವಿಧಾನಸೌಧ, ವಿಕಾಸ ಸೌಧ, ಎಂಎಸ್ ಬಿಲ್ಡಿಂಗ್​​ ಸಚಿವಾಲಯ ನೌಕರರು ಸೇರಿದಂತೆ ನೂರಾರು ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಮಾತನಾಡಿ, ಸಚಿವಾಲಯದಲ್ಲಿ 542 ಕಿರಿಯ ಸಹಾಯಕ ಹುದ್ದೆ ಕಡಿತಗೊಳಿಸುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಸಚಿವಾಲಯದಲ್ಲಿ ಅನ್ಯ ಇಲಾಖೆಯಿಂದ ಬಂದವರನ್ನು ವಾಪಸ್ ಅವರ ಇಲಾಖೆಗೆ ಕಳುಹಿಸಬೇಕು. 2,667 ಹುದ್ದೆಗಳು ಮಂಜೂರಾದರೂ 1802 ಹುದ್ದೆಗಳನ್ನು ಖಾಲಿ ಬಿಡಲಾಗಿದೆ. ಶೇ.60% ಹುದ್ದೆಗಳು ಖಾಲಿ ಇದ್ದರೂ ಕೂಡ ಔಟ್ ಸೋರ್ಸಿಂಗ್ ಹೆಸರಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.

ಸಚಿವರ ಆಪ್ತ ಶಾಖೆಗಳಲ್ಲಿ ಹೆಚ್ಚು ಗುತ್ತಿಗೆ ನೌಕರರನ್ನು ತೆಗೆದುಕೊಳ್ಳಲಾಗುತ್ತಿದೆ. ಇದನ್ನು ಬದಲಾಯಿಸಿ ಸಚಿವಾಲಯದ ನೌಕರರನ್ನೇ ಬಳಸಿಕೊಳ್ಳಬೇಕು. ಸಚಿವಾಲಯವನ್ನು ಒಂದೇ ವ್ಯಾಪ್ತಿಗೆ ತಂದು ಒಂದೇ ಕಡೆ ಕೆಲಸ ಮಾಡುವಂತೆ ಮಾಡಬೇಕು. ಈ ಬೇಡಿಕೆಗಳನ್ನು ಮುಖ್ಯ ಕಾರ್ಯದರ್ಶಿ ಹಗುರವಾಗಿ ಪರಿಗಣಿಸಬೇಡಿ. ಹಗುರವಾಗಿ ಪರಿಗಣಿಸಿದರೆ ಇಡೀ ಸಚಿವಾಲಯವನ್ನೇ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ABOUT THE AUTHOR

...view details