ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪಚನಾವಣೆಯ ಮತದಾನದ ಹೊಸ್ತಿಲಲ್ಲಿದ್ದು, ಬಹುತೇಕ ಸಚಿವರು ಉಭಯ ಕ್ಷೇತ್ರಗಳಲ್ಲಿ ಮತಯಾಚನೆ ಮಾಡುವ ಮೂಲಕ ಆಡಳಿತದ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದೆ.
ಅ.30ರಂದು ನಡೆಯುವ ಉಪಸಮರಕ್ಕೆ ಬಹುತೇಕ ಸಚಿವರು ಮತಯಾಚನೆಯಲ್ಲಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಇಂದು ಕೂಡ ವಿಧಾನಸೌಧಕ್ಕೆ ಕೆಲವೇ ಮಂದಿ ಸಚಿವರು ಹಾಜರಾಗಿದ್ದು ಕಂಡು ಬಂದಿದೆ. ಉಪಚುನಾವಣೆ ಪ್ರಚಾರಕ್ಕೆ ಬೆಂಗಳೂರು ಮೂಲದ ಸಚಿವರು ಹೊರತು ಪಡಿಸಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಹುತೇಕ ಸಚಿವರು ಹಾನಗಲ್ ಅಥವಾ ಸಿಂದಗಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ.
ಸಾರ್ವಜನಿಕರ ಪರದಾಟ