ಕರ್ನಾಟಕ

karnataka

ETV Bharat / state

ಐಎಂಎ ಜ್ಯುವೆಲರ್ಸ್​ ಪ್ರಕರಣ: ಸಚಿವರು, ಶಾಸಕರಿಂದ ಗೃಹ ಸಚಿವರ ಭೇಟಿ, ಚರ್ಚೆ

ಐಎಂಎ ಜ್ಯುವೆಲರ್ಸ್​ನಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣ ಸಂಬಂಧ ಶಾಸಕರು, ಸಚಿವರು ಗೃಹ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

By

Published : Jun 11, 2019, 7:00 PM IST

ಅಲ್ಪಸಂಖ್ಯಾತ ಸಚಿವರು, ಶಾಸಕರಿಂದ ಗೃಹ ಸಚಿವರ ಭೇಟಿ

ಬೆಂಗಳೂರು: ಐಎಂಎ ಜ್ಯುವೆಲರ್ಸ್​ನಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣ ಸಂಬಂಧ ಶಾಸಕರು, ಸಚಿವರು ಗೃಹ ಸಚಿವರನ್ನು ಭೇಟಿ ಮಾಡಿ ಕೆಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.

ಗೃಹ ಸಚಿವ ಎಂ.ಬಿ.ಪಾಟೀಲರ ಸದಾಶಿವನಗರದ ನಿವಾಸದಲ್ಲಿ ಸಭೆ ನಡೆಯಿತು. ಸಚಿವ ಜಮೀರ್ ಅಹ್ಮದ್ ಖಾನ್​, ಶಾಸಕ ಎನ್.ಎ.ಹ್ಯಾರಿಸ್, ರಿಜ್ವಾನ್ ಅರ್ಷದ್, ನಾಸೀರ್ ಅಹ್ಮದ್ ಸೇರಿ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಆಂಬಿಡೆಂಟ್, ಐಎಂಎ ಎರಡೂ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಮೋಸವಾಗಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಜನರಿಗೆ ವಂಚನೆ ಎಸಗಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ನಾಯಕರು ಗೃಹ ಸಚಿವ ಎಂ.ಬಿ.ಪಾಟೀಲ್​​ಗೆ ಮಾಹಿತಿ ಒದಗಿಸಿದರು. ತನಿಖೆಯನ್ನು ಸೂಕ್ತವಾಗಿ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಡ ಹೇರಿದರು.

ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರಿಂದ ಗೃಹ ಸಚಿವರ ಭೇಟಿ

ಐಎಂಎ ಜ್ಯುವೆಲರ್ಸ್ ಪ್ರಕರಣ ಸಂಬಂಧ ಗೃಹ ಸಚಿವ ಎಂಬಿಪಿ ಭೇಟಿ ಬಳಿಕ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಮುಸ್ಲಿಂ ಫೆಡರೇಷನ್‌ ಮುಖಂಡರೆಲ್ಲ ಭೇಟಿಯಾಗಿದ್ದೇವೆ. ಪಾಪ ಬಡವರೆಲ್ಲ ಜೀವನ ಚೆನ್ನಾಗಿರುತ್ತೆ ಅಂತಾ ಹಣ ಹಾಕಿದ್ರು. ಇದಕ್ಕೆ ಎಸ್​​ಐಟಿ ರಚನೆ ಮಾಡಿ ಅಂತ ಹೇಳಿದ್ದೇವೆ. ಚಿನ್ನ, ಬೆಳ್ಳಿ, ಡೈಮಂಡ್ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡಲಿ. ಐಪಿಎಸ್ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಿ ಎಂದು ಒತ್ತಾಯಿಸಿದ್ದೇವೆ. ತಪ್ಪಿತಸ್ಥರು ಯಾರು ಅನ್ನೋದು ಗೊತ್ತಾಗಲಿ ಎಂದರು. ಇದರ ಹಿಂದೆ ಯಾರಾದ್ರೂ ಇರಲಿ ಅದರಲ್ಲಿ ಭಾಗಿಯಾದವರು ಯಾರೇ ಆಗಿರಲಿ ತನಿಖೆ ಆಗಲಿ. ಐಎಂಎ ಜ್ಯುವೆಲರ್ಸ್ ಮಾಲೀಕ 2018ರ ತನಕ ನನಗೆ ಯಾರು ಅಂತ ಗೊತ್ತಿರಲಿಲ್ಲ. ಇಫ್ತಿಯಾರ್ ಕೂಟಕ್ಕೆ ಕರೆದಿದ್ದರು, ಹೋಗಿದ್ದೆ. ಇದರ ಹಿಂದೆ ಯಾರೇ ದೊಡ್ಡ ರಾಜಕಾರಣಿ ಇರಲಿ ಬಿಡಬಾರದು ಎಂದರು. ಎಸ್​ಐಟಿ ತನಿಖೆಗೆ ಸಚಿವರು, ಶಾಸಕರು ಒತ್ತಾಯಿಸಿದ್ದು, ತನಿಖೆ ತೃಪ್ತಿ ತರದೇ ಹೋದರೆ ಉನ್ನತ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಒತ್ತಾಯ ಮಾಡಿದ್ದಾರೆ.

ABOUT THE AUTHOR

...view details