ಕರ್ನಾಟಕ

karnataka

By

Published : Nov 29, 2020, 4:58 PM IST

ETV Bharat / state

ಶಿವಕುಮಾರ್ ಸಾಹೇಬ್ರು ಸಂತೋಷ್ ವಿಚಾರದಲ್ಲಿ ಅನಗತ್ಯ  ಗೊಂದಲ ಸೃಷ್ಟಿಸ್ತಿರೋದ್ಯಾಕೆ?- ವಿ ಸೋಮಣ್ಣ

ಅವ ಚಿಕ್ಕ ಹುಡುಗ.. ಮೊನ್ನೆ ತಾನೆ ಮದ್ವೆ ಮಾಡ್ಕೊಂಡಿದ್ದಾನೆ. ಎರಡು, ಮೂರು ಗಂಟೆ ಅವರ ಜೊತೆ ಕೂತರೆ ಕೌನ್ಸೆಲಿಂಗ್ ಮಾಡ್ತೇನೆ. ನಿಮ್ಮಲ್ಲಿ ಏನಾದರೂ ದಾಖಲೆಗಳಿದ್ದರೆ ಕೊಡಿ..

minister v somnna talk about santhosh sucide attempt case
ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು :ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಅನಗತ್ಯ ಗೊಂದಲ ಸೃಷಿಸುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಆರೋಪ ಮಾಡಿದ್ದಾರೆ.

ಬೆಂಗಳೂರು ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ 1 ಲಕ್ಷ ಬಹುಮಹಡಿ ವಸತಿ ಯೋಜನೆಯ ಕಾಮಗಾರಿಯ ಸ್ಥಳ ವೀಕ್ಷಿಸಿದ ಅವರು ಮೊದಲ ಹಂತವಾಗಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಗಾಣಿಗರಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ಇದನ್ನೂ ಓದಿ:ಸಂತೋಷ್​ ಜನರಲ್ ವಾರ್ಡ್​ಗೆ ಶಿಫ್ಟ್: ಇಂದು ಹೇಳಿಕೆ ಪಡೆಯಲು ಪೊಲೀಸರ ನಿರ್ಧಾರ

ಇನ್ನು, ಸಂಪುಟ ವಿಸ್ತರಣೆ ಮಾಡೋದು ಸಿಎಂ ಪರಮಾಧಿಕಾರ. ಅವರ ಅನುಭವದ ಮುಂದೆ ನಾವೇನಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುತ್ತಾರೆ. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಸಂತೋಷ್ ಆತ್ಮಹತ್ಯೆ ಯತ್ನ ವಿಚಾರವಾಗಿ, "ಅವ ಚಿಕ್ಕ ಹುಡುಗ.. ಮೊನ್ನೆ ತಾನೆ ಮದ್ವೆ ಮಾಡ್ಕೊಂಡಿದ್ದಾನೆ. ಎರಡು, ಮೂರು ಗಂಟೆ ಅವರ ಜೊತೆ ಕೂತರೆ ಕೌನ್ಸೆಲಿಂಗ್ ಮಾಡ್ತೇನೆ. ಶಿವಕುಮಾರ್ ಸಾಹೇಬ್ರು ಯಾಕೆ ಸಂತೋಷ್ ಆತ್ಮಹತ್ಯೆ ಯತ್ನದ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೋ ಗೊತ್ತಿಲ್ಲ. ನಿಮ್ಮಲ್ಲಿ ಏನಾದರೂ ದಾಖಲೆಗಳಿದ್ದರೆ ಕೊಡಿ ಅಂತಾ ಗೃಹ ಸಚಿವರು ಈಗಾಗಲೇ ಹೇಳಿದ್ದಾರೆ'' ಎಂದರು.

ಇದನ್ನೂ ಓದಿ:ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್​

ABOUT THE AUTHOR

...view details